ಒಮ್ಮೆ ಮನೆಗೆ ಬೇಸರದಿಂದ ಬಂದೆ. ಏಕೆಂದು ಹೆಂಡತಿ ಕೇಳಿದಳು. ನಾನು ಕೆಲಸ ಮಾಡ್ತಿದ್ದ ಫ್ಯಾಕ್ಟರಿಗೆ ಬೆಂಕಿ ಬಿದ್ದು 10 ಜನ ಸತ್ತೋದ್ರು ಎಂದೆ. ಅದಕ್ಕೆ ಅವಳು, ‘ನೀವು ಬದುಕಿ ಬಂದಿದ್ದೀರಿ’ ಎಂದು ಪ್ರಶ್ನಿಸಿದರು. ಸಿಗರೇಟು ಸೇದಲು ಹೊರಬಂದಿದ್ದಾಗ ಬೆಂಕಿ ಬಿತ್ತು ಎಂದೆ. ಅಷ್ಟರಲ್ಲಿ ಮೃತಪಟ್ಟವರಿಗೆ ಸರ್ಕಾರ ₹ 10 ಲಕ್ಷ ಬಹುಮಾನ ಘೋಷಿಸಿತು. ಇದರಿಂದ ಅವಳ ಕೋಪ ನೆತ್ತಿಗೇರಿ, ‘ಸಿಗರೇಟು ಸೇದಬೇಡಿ ಎಂದು ಬಡ್ಕೊಂಡೆ, ಕೇಳಿದ್ರಾ ನನ್ ಮಾತು’ ಎಂದಳು....ಈ ಜೋಕ್ ಅರ್ಥವಾಗುತ್ತಿದ್ದಂತೆ ನಗುವಿನ ಅಲೆ.