<p><strong>ಮೈಸೂರು:</strong> ಮಹಾಶಿವರಾತ್ರಿ ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಕಂಡುಬಂತು. ಪೂಜಾಸಾಮಗ್ರಿಗಳು, ಹೂ–ಹಣ್ಣಿಗೆ ಬೇಡಿಕೆ ಹೆಚ್ಚಿತ್ತು.</p><p>ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ನಂಜುಮಳಿಗೆ, ಜೆ.ಕೆ. ಮೈದಾನದ ಆಸುಪಾಸು ಹೂವಿನ ಹಾರಗಳ ರಾಶಿ ಹಾಕಲಾಗಿತ್ತು. ಅದರಲ್ಲೂ ಸೇವಂತಿಗೆಗೆ ಬೇಡಿಕೆ ಹೆಚ್ಚಿತ್ತು. ಸಂಜೆ ಹೊತ್ತು ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿದ್ದು, ಗ್ರಾಹಕರು ಭೇಟಿ ಕೊಟ್ಟರು.</p><p>ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅಲ್ಲಲ್ಲಿ ಇಟ್ಟು ಮಾರಲಾಯಿತು. ಪ್ರತಿ ಕಟ್ಟಿಗೆ ₹20ರಂತೆ ವ್ಯಾಪಾರ ನಡೆಯಿತು. ಪೂಜಾ ಸಾಮಗ್ರಿ ಖರೀದಿಗೂ ಜನರು ಬಂದಿದ್ದು, ಈ ಬಾರಿ ವೀಳ್ಯದೆಲೆ ಹಾಗೂ ಅಡಿಕೆ ಬೆಲೆ ಏರಿಕೆಯ ಬಿಸಿ ತಟ್ಟಿತು.</p><p>ಹೂವುಗಳ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಕನಕಾಂಬರ ಪ್ರತಿ ಕೆ.ಜಿ.ಗೆ ₹700–₹800ರವರೆಗೆ ದರ ಏರಿಸಿಕೊಂಡಿದ್ದರೆ, ಸೇವಂತಿಗೆ ₹200-₹250, ಮಲ್ಲಿಗೆ ₹700–₹800, ಗುಲಾಬಿ ₹250–₹300 ಹಾಗೂ ಚೆಂಡು ಹೂವು ₹40–₹50ರಂತೆ ವ್ಯಾಪಾರ ನಡೆದಿದೆ.</p><p>ಬಾಳೆ ದುಬಾರಿ: ಈ ಬಾರಿ ಶಿವರಾತ್ರಿ ಹಬ್ಬಕ್ಕೆ ಏಲಕ್ಕಿ ಬಾಳೆ ದುಬಾರಿ ಆಗಿದೆ. ಪೂರೈಕೆ ಕಡಿಮೆಯಾಗಿರುವ ಕಾರಣಕ್ಕೆ ಹಬ್ಬಕ್ಕೆ ಮುಂಚೆಯೇ ಬೆಲೆ ಹೆಚ್ಚಳಗೊಂಡಿದ್ದು, ಉತ್ತಮ ದರ್ಜೆಯ ಹಣ್ಣು ಕೆ.ಜಿ.ಗೆ ₹120ವರೆಗೆ ಮಾರಾಟ ನಡೆದಿದೆ. ಉಳಿದ ಹಣ್ಣುಗಳೂ ಬಹುತೇಕ ಬೆಲೆ ಏರಿಸಿಕೊಂಡಿವೆ. ತೆಂಗಿನಕಾಯಿ ಎಂದಿನಂತೆ ದುಬಾರಿಯಾಗಿಯೇ ಇದ್ದು, ದೊಡ್ಡ ಗಾತ್ರದ ಕಾಯಿ ಒಂದಕ್ಕೆ ₹50ರ ಸರಾಸರಿಯಲ್ಲಿ ಮಾರಾಟ ನಡೆದಿದೆ.</p> . <h2>ದೇವಸ್ಥಾನಗಳಲ್ಲಿ ಸಿದ್ಧತೆ...</h2><p>ಮಹಾ ಶಿವರಾತ್ರಿ ಆಚರಣೆಗೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಶಿವನ ದೇಗುಲಗಳಲ್ಲಿ ಶನಿವಾರ ಸಿದ್ಧತೆಗಳು ನಡೆದವು. ಬಹುತೇಕ ದೇಗುಲಗಳಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.</p><p>ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಯಾರಿ ಭರದಿಂದ ನಡೆಯಿತು. ಕೆಲವು ದೇಗುಲಗಳ ಮುಂಭಾಗ ಬ್ಯಾರಿಕೇಡ್, ಹಗ್ಗ ಕಟ್ಟಲಾಯಿತು.</p><p>ಅರಮನೆಯ ತ್ರಿನೇಶ್ವರ ದೇಗುಲದ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ದೇವರ ಮೂರ್ತಿಗೆ ಚಿನ್ನದ ಕೊಳಗ ತೊಡಿಸುವ ಪದ್ಧತಿಯಿದ್ದು, ಅದರ ಸಿದ್ಧತೆಗಳು ನಡೆದವು.</p><p>ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ 108 ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಅದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ಧತೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮಹಾಶಿವರಾತ್ರಿ ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಕಂಡುಬಂತು. ಪೂಜಾಸಾಮಗ್ರಿಗಳು, ಹೂ–ಹಣ್ಣಿಗೆ ಬೇಡಿಕೆ ಹೆಚ್ಚಿತ್ತು.</p><p>ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ನಂಜುಮಳಿಗೆ, ಜೆ.ಕೆ. ಮೈದಾನದ ಆಸುಪಾಸು ಹೂವಿನ ಹಾರಗಳ ರಾಶಿ ಹಾಕಲಾಗಿತ್ತು. ಅದರಲ್ಲೂ ಸೇವಂತಿಗೆಗೆ ಬೇಡಿಕೆ ಹೆಚ್ಚಿತ್ತು. ಸಂಜೆ ಹೊತ್ತು ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿದ್ದು, ಗ್ರಾಹಕರು ಭೇಟಿ ಕೊಟ್ಟರು.</p><p>ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅಲ್ಲಲ್ಲಿ ಇಟ್ಟು ಮಾರಲಾಯಿತು. ಪ್ರತಿ ಕಟ್ಟಿಗೆ ₹20ರಂತೆ ವ್ಯಾಪಾರ ನಡೆಯಿತು. ಪೂಜಾ ಸಾಮಗ್ರಿ ಖರೀದಿಗೂ ಜನರು ಬಂದಿದ್ದು, ಈ ಬಾರಿ ವೀಳ್ಯದೆಲೆ ಹಾಗೂ ಅಡಿಕೆ ಬೆಲೆ ಏರಿಕೆಯ ಬಿಸಿ ತಟ್ಟಿತು.</p><p>ಹೂವುಗಳ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಕನಕಾಂಬರ ಪ್ರತಿ ಕೆ.ಜಿ.ಗೆ ₹700–₹800ರವರೆಗೆ ದರ ಏರಿಸಿಕೊಂಡಿದ್ದರೆ, ಸೇವಂತಿಗೆ ₹200-₹250, ಮಲ್ಲಿಗೆ ₹700–₹800, ಗುಲಾಬಿ ₹250–₹300 ಹಾಗೂ ಚೆಂಡು ಹೂವು ₹40–₹50ರಂತೆ ವ್ಯಾಪಾರ ನಡೆದಿದೆ.</p><p>ಬಾಳೆ ದುಬಾರಿ: ಈ ಬಾರಿ ಶಿವರಾತ್ರಿ ಹಬ್ಬಕ್ಕೆ ಏಲಕ್ಕಿ ಬಾಳೆ ದುಬಾರಿ ಆಗಿದೆ. ಪೂರೈಕೆ ಕಡಿಮೆಯಾಗಿರುವ ಕಾರಣಕ್ಕೆ ಹಬ್ಬಕ್ಕೆ ಮುಂಚೆಯೇ ಬೆಲೆ ಹೆಚ್ಚಳಗೊಂಡಿದ್ದು, ಉತ್ತಮ ದರ್ಜೆಯ ಹಣ್ಣು ಕೆ.ಜಿ.ಗೆ ₹120ವರೆಗೆ ಮಾರಾಟ ನಡೆದಿದೆ. ಉಳಿದ ಹಣ್ಣುಗಳೂ ಬಹುತೇಕ ಬೆಲೆ ಏರಿಸಿಕೊಂಡಿವೆ. ತೆಂಗಿನಕಾಯಿ ಎಂದಿನಂತೆ ದುಬಾರಿಯಾಗಿಯೇ ಇದ್ದು, ದೊಡ್ಡ ಗಾತ್ರದ ಕಾಯಿ ಒಂದಕ್ಕೆ ₹50ರ ಸರಾಸರಿಯಲ್ಲಿ ಮಾರಾಟ ನಡೆದಿದೆ.</p> . <h2>ದೇವಸ್ಥಾನಗಳಲ್ಲಿ ಸಿದ್ಧತೆ...</h2><p>ಮಹಾ ಶಿವರಾತ್ರಿ ಆಚರಣೆಗೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಶಿವನ ದೇಗುಲಗಳಲ್ಲಿ ಶನಿವಾರ ಸಿದ್ಧತೆಗಳು ನಡೆದವು. ಬಹುತೇಕ ದೇಗುಲಗಳಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.</p><p>ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಯಾರಿ ಭರದಿಂದ ನಡೆಯಿತು. ಕೆಲವು ದೇಗುಲಗಳ ಮುಂಭಾಗ ಬ್ಯಾರಿಕೇಡ್, ಹಗ್ಗ ಕಟ್ಟಲಾಯಿತು.</p><p>ಅರಮನೆಯ ತ್ರಿನೇಶ್ವರ ದೇಗುಲದ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ದೇವರ ಮೂರ್ತಿಗೆ ಚಿನ್ನದ ಕೊಳಗ ತೊಡಿಸುವ ಪದ್ಧತಿಯಿದ್ದು, ಅದರ ಸಿದ್ಧತೆಗಳು ನಡೆದವು.</p><p>ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ 108 ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಅದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ಧತೆ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>