ಮೈಸೂರು: ಇಲ್ಲಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಿರಂತರ ಪ್ರತಿಷ್ಠಾನದಿಂದ ನಡೆಯುತ್ತಿರುವ ‘ನಿರಂತರ ರಂಗೋತ್ಸವ’ದಲ್ಲಿ 3ನೇ ದಿನವಾದ ಶುಕ್ರವಾರ ಪ್ರದರ್ಶನಗೊಂಡ ‘ನವಿಲು ಪುರಾಣ’ ಪ್ರೇಕ್ಷಕರನ್ನು ರಂಜಿಸಿತು.
ಬೆಂಗಳೂರಿನ ‘ಅನೇಕ’ ತಂಡದವರು ಪ್ರಸ್ತುತಪಡಿಸಿದರು.
ರಂಗ ಕಲಾವಿದೆ ಇಂದಿರಾ ನಾಯರ್ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್ (ಚೀನಿ) ಅವರಿಗೆ ನಮನ ಸಲ್ಲಿಸಿದರು. ‘ನಿರಂತರ ರಂಗೋತ್ಸವವನ್ನು 14 ವರ್ಷದಿಂದ ಶಿಸ್ತಿನಿಂದ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
ರಂಗ ಕಲಾವಿದ ನಾ.ದಿವಾಕರ್ ಮಾತನಾಡಿ, ‘ರಂಗ ಭೂಮಿಗೆ ಚಿಕಿತ್ಸಕ ಗುಣವಿದೆ’ ಎಂದು ಹೇಳಿದರು.