ಮೈಸೂರು: ರಂಜಿಸಿದ ‘ನವಿಲು ಪುರಾಣ’

ಮೈಸೂರು: ಇಲ್ಲಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಿರಂತರ ಪ್ರತಿಷ್ಠಾನದಿಂದ ನಡೆಯುತ್ತಿರುವ ‘ನಿರಂತರ ರಂಗೋತ್ಸವ’ದಲ್ಲಿ 3ನೇ ದಿನವಾದ ಶುಕ್ರವಾರ ಪ್ರದರ್ಶನಗೊಂಡ ‘ನವಿಲು ಪುರಾಣ’ ಪ್ರೇಕ್ಷಕರನ್ನು ರಂಜಿಸಿತು.
ಬೆಂಗಳೂರಿನ ‘ಅನೇಕ’ ತಂಡದವರು ಪ್ರಸ್ತುತಪಡಿಸಿದರು.
ರಂಗ ಕಲಾವಿದೆ ಇಂದಿರಾ ನಾಯರ್ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್ (ಚೀನಿ) ಅವರಿಗೆ ನಮನ ಸಲ್ಲಿಸಿದರು. ‘ನಿರಂತರ ರಂಗೋತ್ಸವವನ್ನು 14 ವರ್ಷದಿಂದ ಶಿಸ್ತಿನಿಂದ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
ರಂಗ ಕಲಾವಿದ ನಾ.ದಿವಾಕರ್ ಮಾತನಾಡಿ, ‘ರಂಗ ಭೂಮಿಗೆ ಚಿಕಿತ್ಸಕ ಗುಣವಿದೆ’ ಎಂದು ಹೇಳಿದರು.
ರಂಗ ಕಲಾವಿದ ಕೆ.ಇ.ರಾಧಾಕೃಷ್ಣ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.