ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯುವಜನರು, ವಿದ್ಯಾವಂತರನ್ನು ಹೆಚ್ಚು ಕಣಕ್ಕಿಳಿಸಿದ್ದು, ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಚ್ಛ, ನಿಷ್ಕಳಂಕ ವ್ಯಕ್ತಿತ್ವದ ಪ್ರಭಾವವಿದೆ. ಈ ಎಲ್ಲರನ್ನು ಗೆಲ್ಲಿಸುವುದು ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯ’ ಎಂದು ತಾಲ್ಲೂಕು ಕನಕ ಯುವ ಸಮಿತಿಯ ರಾಯನಹುಂಡಿ ಆರ್. ಶಶಿಕುಮಾರ್ ಹಾಗೂ ವರಕೂಡು ದೊಡ್ಡಗೌಡ ಮನವಿ ಮಾಡಿದ್ದಾರೆ.