ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಕೆ.ಪುರಾಣಿಕ್ ಮಾತನಾಡಿ, ‘ಹಿಂದೂ ಸಮಾಜದ ಒಂದು ಸೂರ್ಯ ಅಸ್ತಂಗತವಾಗಿದೆ. ಹಿಂದೂ ಸಮಾಜ ಮಾತ್ರವಲ್ಲ ದೇಶದ ಏಳಿಗೆಗೆ ಪೇಜಾವರ ಶ್ರೀ 88 ವರ್ಷಗಳ ಕಾಲ ಅವಿರತವಾಗಿ ಪ್ರಯತ್ನಿಸಿದರು. ಎಲ್ಲ ಧರ್ಮಗಳನ್ನೂ ಇವರು ಸಮಾನವಾಗಿ ಕಾಣುತ್ತಿದ್ದರು. ಪ್ರಾಣಿ, ಪಕ್ಷಿ, ತರು, ಲತೆಗಳನ್ನೂ ಇವರು ಹಿಂಸಿಸುತ್ತಿರುಲಿಲ್ಲ. ಅಂತಹ ಅಹಿಂಸಾಧರ್ಮ ಇವರದ್ದಾಗಿತ್ತು’ ಎಂದು ಬಣ್ಣಿಸಿದರು.