ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಗೆ ಸ್ಪರ್ಧಿಸಿರುವುದರಿಂದ ದೇವರಾಜ ಅರಸು ಸಮಾಧಿಗೆ ನಮಿಸುತ್ತಿದ್ದಾರೆ. ಯಾವತ್ತೂ ಪೌರಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸದವರು ಇಂದು ಮಾಸ್ಕ್, ಗ್ಲೌಸ್ ಧರಿಸಿ ಕಸ ಎತ್ತುತ್ತಿದ್ದಾರೆ. ಈ ಹಿಂದೆ ಎಲ್ಲಾದರೂ ಅಂಬೇಡ್ಕರ್, ಬಸವಣ್ಣ, ಗಾಂಧಿ ಪ್ರತಿಮೆಗೆ ನಮಿಸಿದ್ದ ಉದಾಹರಣೆಯಿದೆಯೇ’ ಎಂದು ಪ್ರಶ್ನಿಸಿದರು.