<p><strong>ತಲಕಾಡು</strong>: ಪಂಚಲಿಂಗ ಸಮೂಹದ ವೈದ್ಯನಾಥೇಶ್ವರ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಕಚೇರಿಯ ಪಕ್ಕದಲ್ಲಿರುವ ಮರ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದ್ದು, ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಮಳೆ ಗಾಳಿಯ ಸಂದರ್ಭದಲ್ಲಿ ಅಪಾಯದ ಸಮಸ್ಯೆ ಹೆಚ್ಚಿದ್ದು, ಇದನ್ನು ತೆರವು ಮಾಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅರಣ್ಯ ಇಲಾಖೆ ಕೈಕಟ್ಟಿ ಗಮನ ಹರಿಸಿಲ್ಲ. ಮರ ತೆರವುಗೊಳಿಸುವ ಬಗ್ಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.</p>.<p>ಮರದ ತಳದ ಬೇರುಗಳು ಬೆಂಕಿಗೆ ಆಹುತಿಯಾಗಿ ಮರ ಸಡಿಲವಾಗಿದೆ. ಜೋರಾಗಿ ಮಳೆ ಗಾಳಿ ಬೀಸಿದರೆ ಮರ ಸಂಪೂರ್ಣವಾಗಿ ನೆಲಕಚ್ಚಲಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು, ಸಾರ್ವಜನಿಕರ ಜೊತೆಗೆ ದೇವಾಲಯವು ಹಾನಿಗೊಳ್ಳುವ ಸಂಭವ ಹೆಚ್ಚಿದೆ.</p>.<div><blockquote>ವೈದ್ಯನಾಥೇಶ್ವರ ದೇವಸ್ಥಾನ ಮುಂಭಾಗ ಇರುವ ಮರವನ್ನು ಇನ್ನೆರಡು ದಿನಗಳಲ್ಲಿ ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ನಾಗರಾಜು, ಅರಣ್ಯ ಅಧಿಕಾರಿ, ಮೀಸಲು ಅರಣ್ಯ ಪ್ರದೇಶ ತಲಕಾಡು</span></div>.<p>‘ನಮ್ಮ ಮನೆ ಮುಂಭಾಗದಲ್ಲಿರುವ ಮರವು ಬಹುತೇಕ ಹಾಳಾಗಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಮುಂದೆ ಇದರಿಂದ ಪ್ರಾಣಾಪಾಯ ಖಂಡಿತ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಕೀರ್ತಿ.</p>.<p>‘ಮರವು ವೀರಭದ್ರಸ್ವಾಮಿ ದೇವಾಲಯಕ್ಕೆ ಸಮೀಪವಿರುವುದರಿಂದ ಬಹುತೇಕ ಮರವು ಶಿಥಿಲಾವಸ್ಥೆಯಲ್ಲಿದೆ. ಯಾವ ಸಮಯದಲ್ಲಾದರೂ ಧರೆಗೆ ಉರುಳುವುದರಿಂದ ದೇವಸ್ಥಾನಕ್ಕೆ ಬಹಳಷ್ಟು ದೊಡ್ಡ ಹಾನಿಯಾಗಲಿದೆ’ ಎಂದು ವೀರಭದ್ರ ಸ್ವಾಮಿ ದೇವಾಲಯದ ಅರ್ಚಕ ರಾಜು ಹೊನ್ನಪ್ಪ ತಿಳಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಲಕಾಡು</strong>: ಪಂಚಲಿಂಗ ಸಮೂಹದ ವೈದ್ಯನಾಥೇಶ್ವರ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಕಚೇರಿಯ ಪಕ್ಕದಲ್ಲಿರುವ ಮರ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದ್ದು, ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಮಳೆ ಗಾಳಿಯ ಸಂದರ್ಭದಲ್ಲಿ ಅಪಾಯದ ಸಮಸ್ಯೆ ಹೆಚ್ಚಿದ್ದು, ಇದನ್ನು ತೆರವು ಮಾಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅರಣ್ಯ ಇಲಾಖೆ ಕೈಕಟ್ಟಿ ಗಮನ ಹರಿಸಿಲ್ಲ. ಮರ ತೆರವುಗೊಳಿಸುವ ಬಗ್ಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.</p>.<p>ಮರದ ತಳದ ಬೇರುಗಳು ಬೆಂಕಿಗೆ ಆಹುತಿಯಾಗಿ ಮರ ಸಡಿಲವಾಗಿದೆ. ಜೋರಾಗಿ ಮಳೆ ಗಾಳಿ ಬೀಸಿದರೆ ಮರ ಸಂಪೂರ್ಣವಾಗಿ ನೆಲಕಚ್ಚಲಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು, ಸಾರ್ವಜನಿಕರ ಜೊತೆಗೆ ದೇವಾಲಯವು ಹಾನಿಗೊಳ್ಳುವ ಸಂಭವ ಹೆಚ್ಚಿದೆ.</p>.<div><blockquote>ವೈದ್ಯನಾಥೇಶ್ವರ ದೇವಸ್ಥಾನ ಮುಂಭಾಗ ಇರುವ ಮರವನ್ನು ಇನ್ನೆರಡು ದಿನಗಳಲ್ಲಿ ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಲಾಗುವುದು.</blockquote><span class="attribution">ನಾಗರಾಜು, ಅರಣ್ಯ ಅಧಿಕಾರಿ, ಮೀಸಲು ಅರಣ್ಯ ಪ್ರದೇಶ ತಲಕಾಡು</span></div>.<p>‘ನಮ್ಮ ಮನೆ ಮುಂಭಾಗದಲ್ಲಿರುವ ಮರವು ಬಹುತೇಕ ಹಾಳಾಗಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಮುಂದೆ ಇದರಿಂದ ಪ್ರಾಣಾಪಾಯ ಖಂಡಿತ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಕೀರ್ತಿ.</p>.<p>‘ಮರವು ವೀರಭದ್ರಸ್ವಾಮಿ ದೇವಾಲಯಕ್ಕೆ ಸಮೀಪವಿರುವುದರಿಂದ ಬಹುತೇಕ ಮರವು ಶಿಥಿಲಾವಸ್ಥೆಯಲ್ಲಿದೆ. ಯಾವ ಸಮಯದಲ್ಲಾದರೂ ಧರೆಗೆ ಉರುಳುವುದರಿಂದ ದೇವಸ್ಥಾನಕ್ಕೆ ಬಹಳಷ್ಟು ದೊಡ್ಡ ಹಾನಿಯಾಗಲಿದೆ’ ಎಂದು ವೀರಭದ್ರ ಸ್ವಾಮಿ ದೇವಾಲಯದ ಅರ್ಚಕ ರಾಜು ಹೊನ್ನಪ್ಪ ತಿಳಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>