ಮಳೆ ಬಂದ ಮೊದಲ 15 ನಿಮಿಷಗಳಲ್ಲಿ ಸಂಗ್ರಹವಾಗುವ ನೀರನ್ನು ಸಂಪಿಗೆ ಬಿಡಬಾರದು. ಆ ನೀರಿನಲ್ಲಿ ತಾರಸಿಯ ಕೊಳೆ, ಕಶ್ಮಲಗಳು ಮಿಶ್ರಣಗೊಳ್ಳುತ್ತವೆ. ಆ ನೀರು ಹೊರಗೆ ಹರಿದುಹೋಗಲೆಂದೇ ಪ್ರತ್ಯೇಕವಾದ ಕೊಳವೆ ಇದೆ. 15 ನಿಮಿಷಗಳ ನಂತರ ಆ ಕೊಳವೆಯ ವಾಲ್ವ್ ಅನ್ನು ಬಂದ್ ಮಾಡಿ, ಫಿಲ್ಟರ್ ಇರುವ ಕಡೆಯ ವಾಲ್ವ್ ಅನ್ನು ಆನ್ ಮಾಡಬೇಕು. ಆಗ ನೀರು ಫಿಲ್ಟರ್ಗೆ ಬಂದು ಅಲ್ಲಿ ತೇಲುವ ಕಶ್ಮಲಗಳೆಲ್ಲ ಶುದ್ಧೀಕರಣಗೊಂಡು ನೀರು ಸಂಪ್ ಸೇರುತ್ತದೆ. ಈ ನೀರು ಕೊಳವೆ ಬಾವಿ ಮತ್ತು ನದಿ ನೀರಿಗಿಂತ ಶುದ್ಧವಾದ ನೀರು ಎಂದು ಜಯರಾಮಯ್ಯ ಹೇಳುತ್ತಾರೆ.