<p><strong>ಮೈಸೂರು</strong>: ಮೈಸೂರು ಮಹಾನಗರ ಪಾಲಿಕೆ ಮುಂದುವರಿದ ಕೌನ್ಸಿಲ್ ಸಭೆಯಲ್ಲಿ ಗುರುವಾರ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳು ಹಾಗೂ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ವಿಚಾರ ಪ್ರತಿಧ್ವನಿಸಿದವು.</p>.<p>ಸಭೆಯಲ್ಲಿ ಬಿ.ವಿ.ಶ್ರೀಧರ್ ಸೇರಿ ದಂತೆ ಹಲವು ಸದಸ್ಯರು ಗುತ್ತಿಗೆ ಪೌರ ಕಾರ್ಮಿಕರ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಪ್ರತಿ ದಸರಾದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಅವರಿಗೆ ನ್ಯಾಯಸಮ್ಮತ ಸೌಲಭ್ಯಗಳು ಸಿಗಬೇಕು. ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.</p>.<p>ಬಳಿಕ ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಪಾವತಿಸಬೇಕಿರುವ ₹ 130 ಕೋಟಿ ಬಿಡುಗಡೆ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಬಾಕಿ ಹಣ ಬಿಡುಗಡೆ ಮಾಡುವವರೆಗೆ ಪಾಲಿಕೆಯ ಯಾವುದೇ ಕಾಮಗಾರಿ ಕೈಗೆತ್ತಿಕೊ ಳ್ಳುವುದಿಲ್ಲ ಎಂದು ಗುತ್ತಿಗೆದಾರರು ಪ್ರತಿಭಟನೆಗಿಳಿದಿರುವ ವಿಚಾರ ವನ್ನೂಆಯುಕ್ತರ ಗಮನಕ್ಕೆ<br />ತಂದರು.</p>.<p>ಈ ಕುರಿತು ಪ್ರತಿಕ್ರಿಯಿಸಿ, ಪಾಲಿ ಕೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ, ಈಗ ನೀಡುವುದು ಕಷ್ಟ. ಹಂತಹಂತವಾಗಿ ಬಿಡುಗಡೆ ಮಾಡ ಲಾಗುವುದು ಎಂದರು. ಈಗ ₹ 10 ಕೋಟಿಯನ್ನಾದರೂ ಬಿಡುಗಡೆ ಮಾಡು ವಂತೆ ಸದಸ್ಯರುಪಟ್ಟು ಹಿಡಿದರು.</p>.<p>ಆಗ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಸೇರಿದಂತೆ ಹಲವರು, ನೀರಿನ ತೆರಿಗೆ ಸಂಗ್ರಹದಲ್ಲಿ ಉಂಟಾಗು ತ್ತಿರುವ ತೆರಿಗೆ ಲೋಪದ ವಿಚಾರ ಪ್ರಸ್ತಾಪಿಸಿದರು. ನಗರಕ್ಕೆ ಕಬಿನಿ, ಕಾವೇರಿಯಿಂದ 250 ಎಂಎಲ್ಡಿ ನೀರು ಬರುತ್ತಿದ್ದು, ಎಷ್ಟು ತೆರಿಗೆ ಸಂಗ್ರಹ ಮಾಡಲಾಗುತ್ತಿದೆ, ಆ ಹಣ ಏನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.</p>.<p class="Subhead">ಸೆಸ್ ಕಡಿಮೆ ಬೇಡ: ಖಾಲಿ ನಿವೇಶನ ಸ್ವಚ್ಛತೆಗೆ ವಿಧಿಸುತ್ತಿರುವ ಸೆಸ್ನಲ್ಲಿ ಕಡಿಮೆ ಮಾಡಬಾರದು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮೈಸೂರು ಮಹಾನಗರ ಪಾಲಿಕೆ ಮುಂದುವರಿದ ಕೌನ್ಸಿಲ್ ಸಭೆಯಲ್ಲಿ ಗುರುವಾರ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳು ಹಾಗೂ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ವಿಚಾರ ಪ್ರತಿಧ್ವನಿಸಿದವು.</p>.<p>ಸಭೆಯಲ್ಲಿ ಬಿ.ವಿ.ಶ್ರೀಧರ್ ಸೇರಿ ದಂತೆ ಹಲವು ಸದಸ್ಯರು ಗುತ್ತಿಗೆ ಪೌರ ಕಾರ್ಮಿಕರ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಪ್ರತಿ ದಸರಾದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಅವರಿಗೆ ನ್ಯಾಯಸಮ್ಮತ ಸೌಲಭ್ಯಗಳು ಸಿಗಬೇಕು. ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.</p>.<p>ಬಳಿಕ ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಪಾವತಿಸಬೇಕಿರುವ ₹ 130 ಕೋಟಿ ಬಿಡುಗಡೆ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಬಾಕಿ ಹಣ ಬಿಡುಗಡೆ ಮಾಡುವವರೆಗೆ ಪಾಲಿಕೆಯ ಯಾವುದೇ ಕಾಮಗಾರಿ ಕೈಗೆತ್ತಿಕೊ ಳ್ಳುವುದಿಲ್ಲ ಎಂದು ಗುತ್ತಿಗೆದಾರರು ಪ್ರತಿಭಟನೆಗಿಳಿದಿರುವ ವಿಚಾರ ವನ್ನೂಆಯುಕ್ತರ ಗಮನಕ್ಕೆ<br />ತಂದರು.</p>.<p>ಈ ಕುರಿತು ಪ್ರತಿಕ್ರಿಯಿಸಿ, ಪಾಲಿ ಕೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ, ಈಗ ನೀಡುವುದು ಕಷ್ಟ. ಹಂತಹಂತವಾಗಿ ಬಿಡುಗಡೆ ಮಾಡ ಲಾಗುವುದು ಎಂದರು. ಈಗ ₹ 10 ಕೋಟಿಯನ್ನಾದರೂ ಬಿಡುಗಡೆ ಮಾಡು ವಂತೆ ಸದಸ್ಯರುಪಟ್ಟು ಹಿಡಿದರು.</p>.<p>ಆಗ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಸೇರಿದಂತೆ ಹಲವರು, ನೀರಿನ ತೆರಿಗೆ ಸಂಗ್ರಹದಲ್ಲಿ ಉಂಟಾಗು ತ್ತಿರುವ ತೆರಿಗೆ ಲೋಪದ ವಿಚಾರ ಪ್ರಸ್ತಾಪಿಸಿದರು. ನಗರಕ್ಕೆ ಕಬಿನಿ, ಕಾವೇರಿಯಿಂದ 250 ಎಂಎಲ್ಡಿ ನೀರು ಬರುತ್ತಿದ್ದು, ಎಷ್ಟು ತೆರಿಗೆ ಸಂಗ್ರಹ ಮಾಡಲಾಗುತ್ತಿದೆ, ಆ ಹಣ ಏನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.</p>.<p class="Subhead">ಸೆಸ್ ಕಡಿಮೆ ಬೇಡ: ಖಾಲಿ ನಿವೇಶನ ಸ್ವಚ್ಛತೆಗೆ ವಿಧಿಸುತ್ತಿರುವ ಸೆಸ್ನಲ್ಲಿ ಕಡಿಮೆ ಮಾಡಬಾರದು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>