‘ವೈಯುಕ್ತಿಕವಾಗಿ ತೆಗೆದುಕೊಂಡಿದ್ದು ನಾನಲ್ಲ. ನನ್ನ ಚೌಲ್ಟ್ರಿ ರಾಜಕಾಲುವೆ ಮೇಲೆ ಇಲ್ಲವೆಂದು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದಾರೆ. ಆದರೆ, ನಾನು ರೋಹಿಣಿ ವಿರುದ್ಧ ಮಾಡಿದ್ದ ಆರು ಆರೋಪಗಳ ಪೈಕಿ ನಾಲ್ಕು ಸಾಬೀತಾಗಿವೆ. ಜಿಲ್ಲೆಯಲ್ಲಿ ಕೋವಿಡ್ನಿಂದಾದ ಸಾವು ಮುಚ್ಚಿಟ್ಟಿದ್ದು, ಪಾರಂಪರಿಕ ಕಟ್ಟಡ ದುರ್ಬಳಕೆ, ಈಜುಕೊಳ ಅಕ್ರಮವಾಗಿ ನಿರ್ಮಿಸಿದ್ದು ಮೊದಲಾದ ತಪ್ಪುಗಳು ಸಾಬೀತಾಗಿವೆ. ಈ ಬಗ್ಗೆ ಸರ್ಕಾರಕ್ಕೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದೇನೆ. ಈಗ ರೋಹಿಣಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುವುದಿಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದು, ಬಿಡುವುದು ಸರ್ಕಾರದ ಅಂಗಳದಲ್ಲಿದೆ’ ಎಂದರು.