<p><strong>ಸರಗೂರು:</strong> ತಾಲ್ಲೂಕಿನ ಸಾಗರೆ ಮಾರಮ್ಮ ಜಾತ್ರೆ ಹಾಗೂ ಕೊಂಡ ಮಹೋತ್ಸವ ಮಾ.25ರಂದು (ಮಂಗಳವಾರ) ಜರಗುಲಿದ್ದು, ಸಿದ್ಧತೆ ಭರಪೂರವಾಗಿ ನಡೆದಿದೆ.</p>.<p>ಜಾತ್ರೋತ್ಸವಕ್ಕೆ ಪಟ್ಟಣ, ದೇಗುಲಗಳು ವಿದ್ಯುತ್ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಸಿಂಗಾರಗೊಂಡಿದೆ.</p>.<p>ಕೊಂಡೋತ್ಸವಕ್ಕೆ ಕೊಂಡ ಬೇಯಿಸಲು ಕಗ್ಗಲಿ ಸೌದೆಯನ್ನು ಎತ್ತಿನ ಗಾಡಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಅಮ್ಮನವರ ಸನ್ನಿಧಾನಕ್ಕೆ ತರುವುದು ವಾಡಿಕೆ.</p>.<p>ಮಧ್ಯಾಹ್ನ 12ಕ್ಕೆ ಕಪಿಲಾ ನದಿಯಲ್ಲಿ ಪೂಜೆ ಸಲ್ಲಿಸಿ ಅಮ್ಮನವರ ವಿಗ್ರಹ ತರಲಾಗುತ್ತದೆ. 1.30ಕ್ಕೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಾದ್ಯಗೋಷ್ಠಿಯೊಂದಿಗೆ ತೆರಳಿ ಅಮ್ಮನವರಿಗೆ ಅಲಂಕಾರ ಮಾಡಲು ಹೂವು, ಹೊಂಬಾಳೆ ತರಲಾಗುವುದು.</p>.<p>2 ಘಂಟೆಗೆ ಅಮ್ಮನವರ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಹೊರಟು ಸಾಗರೆ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಸಂಜೆ 4.30 ಘಂಟೆಗೆ ದೇವಸ್ಥಾನದ ಅರ್ಚಕರ ಮನೆಯಿಂದ ಅಮ್ಮನವರ ಸನ್ನಿಧಿಗೆ ಮಡೆ ಅನ್ನ ತರಲಾಗುವುದು. ನಂತರ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಹಾಗೂ ವೀರಮಕ್ಕಳು ಕೊಂಡ ತುಳಿಯುವರು.</p>.<p>ಸಂಜೆ 4.45ಕ್ಕೆ ಮಾರಮ್ಮನವರ ಮುಂದೆ ಎಳನೀರಿನಲ್ಲಿ ಹಸಿಬಾಳೆ ನಾರು ಹಾಕಿ ದೀಪ ಹಚ್ಚಿ ಜ್ಯೋತಿ ಬೆಳಗಿಸುವುದು. ಈ ಜ್ಯೋತಿ ನೋಡಲು ರಾಜ್ಯದ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುವರು.</p>.<p>ಚಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸರಗೂರು, ಹ್ಯಾಂಡ್ ಪೋಸ್ಟ್, ಎಚ್.ಡಿ.ಕೋಟೆಯಿಂದ ಸಾಗರೆ ಗ್ರಾಮಕ್ಕೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರಗೂರು:</strong> ತಾಲ್ಲೂಕಿನ ಸಾಗರೆ ಮಾರಮ್ಮ ಜಾತ್ರೆ ಹಾಗೂ ಕೊಂಡ ಮಹೋತ್ಸವ ಮಾ.25ರಂದು (ಮಂಗಳವಾರ) ಜರಗುಲಿದ್ದು, ಸಿದ್ಧತೆ ಭರಪೂರವಾಗಿ ನಡೆದಿದೆ.</p>.<p>ಜಾತ್ರೋತ್ಸವಕ್ಕೆ ಪಟ್ಟಣ, ದೇಗುಲಗಳು ವಿದ್ಯುತ್ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಸಿಂಗಾರಗೊಂಡಿದೆ.</p>.<p>ಕೊಂಡೋತ್ಸವಕ್ಕೆ ಕೊಂಡ ಬೇಯಿಸಲು ಕಗ್ಗಲಿ ಸೌದೆಯನ್ನು ಎತ್ತಿನ ಗಾಡಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಅಮ್ಮನವರ ಸನ್ನಿಧಾನಕ್ಕೆ ತರುವುದು ವಾಡಿಕೆ.</p>.<p>ಮಧ್ಯಾಹ್ನ 12ಕ್ಕೆ ಕಪಿಲಾ ನದಿಯಲ್ಲಿ ಪೂಜೆ ಸಲ್ಲಿಸಿ ಅಮ್ಮನವರ ವಿಗ್ರಹ ತರಲಾಗುತ್ತದೆ. 1.30ಕ್ಕೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಾದ್ಯಗೋಷ್ಠಿಯೊಂದಿಗೆ ತೆರಳಿ ಅಮ್ಮನವರಿಗೆ ಅಲಂಕಾರ ಮಾಡಲು ಹೂವು, ಹೊಂಬಾಳೆ ತರಲಾಗುವುದು.</p>.<p>2 ಘಂಟೆಗೆ ಅಮ್ಮನವರ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಹೊರಟು ಸಾಗರೆ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಸಂಜೆ 4.30 ಘಂಟೆಗೆ ದೇವಸ್ಥಾನದ ಅರ್ಚಕರ ಮನೆಯಿಂದ ಅಮ್ಮನವರ ಸನ್ನಿಧಿಗೆ ಮಡೆ ಅನ್ನ ತರಲಾಗುವುದು. ನಂತರ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಹಾಗೂ ವೀರಮಕ್ಕಳು ಕೊಂಡ ತುಳಿಯುವರು.</p>.<p>ಸಂಜೆ 4.45ಕ್ಕೆ ಮಾರಮ್ಮನವರ ಮುಂದೆ ಎಳನೀರಿನಲ್ಲಿ ಹಸಿಬಾಳೆ ನಾರು ಹಾಕಿ ದೀಪ ಹಚ್ಚಿ ಜ್ಯೋತಿ ಬೆಳಗಿಸುವುದು. ಈ ಜ್ಯೋತಿ ನೋಡಲು ರಾಜ್ಯದ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುವರು.</p>.<p>ಚಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸರಗೂರು, ಹ್ಯಾಂಡ್ ಪೋಸ್ಟ್, ಎಚ್.ಡಿ.ಕೋಟೆಯಿಂದ ಸಾಗರೆ ಗ್ರಾಮಕ್ಕೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>