ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾತನಾಡಿದ ಅವರು, ‘ನಾನು ನೋಡಿದಂತೆ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ. ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಹಳ ಪ್ರಚಾರ ಮಾಡುತ್ತಿದ್ದರು. ತಲಾ ಎರಡು ಬಾರಿ ಲೋಕಸಭೆ ಹಾಗೂ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಘಟನೆಯಲ್ಲಿದ್ದು ಲವಲವಿಕೆಯಿಂದ ಇದ್ದರು. ಅವರ ಅಕಾಲಿಕ ನಿಧನ ದುಃಖ ತರಿಸಿದೆ’ ಎಂದರು.