<p><strong>ಕಳಲೆ (ಮೈಸೂರು ಜಿಲ್ಲೆ):</strong> ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂಡದವರಿಗೆ, ವಾಸ್ತವ್ಯಕ್ಕೆ, ಊಟ–ಉಪಾಹಾರಕ್ಕೆ, ವಿಶ್ರಾಂತಿ ಪಡೆಯುವುದಕ್ಕೆ ಮೊದಲಾದ ವ್ಯವಸ್ಥೆಯನ್ನು ಕಂಟೇನರ್ಗಳಲ್ಲೇ ಕಲ್ಪಿಸಿರುವುದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಗಮನಸೆಳೆಯುತ್ತಿದೆ.</p>.<p>ರಸ್ತೆಯಲ್ಲಿ ಸಾಲಾಗಿ ಬರುತ್ತಿದ್ದ ಕಂಟೇನರ್ಗಳನ್ನು ನೋಡಲು ಅವರು ಮುಗಿಬಿದ್ದರು. ಒಳಗೇನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅವರದಾಗಿತ್ತು. ಆದರೆ, ಅದನ್ನು ನಿರ್ವಹಿಸುವವರು ಅವಕಾಶ ಕೊಡಲಿಲ್ಲ.</p>.<p>* ವಿವಿಧ ಕಡೆಗಳಿಂದ ನೂರಾರು ವಾಹನಗಳು ಬಂದಿದ್ದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ಅಸ್ತವ್ಯಸ್ತವಾಯಿತು.</p>.<p>* ರಾಹುಲ್ ಮತ್ತು ನಾಯಕರ ಕೈಕುಲಕಲು ಮುಂದಾಗುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.</p>.<p>* ಮಾರ್ಗದುದ್ದಕ್ಕೂ ಪಕ್ಷದ ಹಾಗೂ ಪಾದಯಾತ್ರೆಯ ವಿಶೇಷ ಧ್ವಜಗಳು ರಾರಾಜಿಸಿದವು.</p>.<p>* ಇಡೀ ಯಾತ್ರೆಯುದ್ದಕ್ಕೂ ಸಾಗಲಿರುವ ‘ಭಾರತ ಯಾತ್ರಿ’ಗಳಿಗಾಗಿ ವಿಶ್ರಾಂತಿಗೆ ವಿಶೇಷ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಹಾಸಿಗೆಗಳಲ್ಲಿ ಮಲಗಿ ಅವರು ವಿರಮಿಸಿದರು. ವೈದ್ಯಕೀಯ ಸೌಲಭ್ಯವನ್ನು ಅಲ್ಲಿ ಕಲ್ಪಿಸಲಾಗಿತ್ತು.</p>.<p>* ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ಕಳಲೆ ಗೇಟ್ ಬಳಿ ಉಪಾಹಾರ–ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಹಳ ಆಹಾರ ಪದಾರ್ಥ ವ್ಯರ್ಥವಾಯಿತು.</p>.<p>* ಪಾದಯಾತ್ರಿಗಳು ಹಾಗೂ ಮುಖಂಡರ ವಿಶ್ರಾಂತಿಗಾಗಿ ವಿಶೇಷವಾಗಿ ಟೆಂಟ್ಗಳ ಮಾಡಲಾಗಿತ್ತು. ಅಲ್ಲಿಗೆ ಕಾರ್ಯಕರ್ತರಿಗಾಗಲಿ ಅಥವಾ ಬೇರೆಯವರಿಗಾಗಲಿ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಬಿಗಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದರು. ಶಾಸಕರು, ನಾಯಕರನ್ನೂ ಪೊಲೀಸರು ತಡೆದರು!</p>.<p>* ರಾಹುಲ್ ಜೊತೆ ಹೆಜ್ಜೆ ಹಾಕಲು ಹಾಗೂ ಫೋಟೊ ತೆಗೆಸಿಕೊಳ್ಳಲು ನಾಯಕರು ಮುಗಿಬಿದ್ದರು. ರಾಹುಲ್ ಭದ್ರತಾ ಸಿಬ್ಬಂದಿಯು, ಪ್ರತಿ ನಾಯಕರಿಗೆ ಕೆಲವೇ ನಿಮಿಷಗಳ ಅವಕಾಶ ಕೊಡುತ್ತಿದ್ದರು. ಹಿಂದೆ ಹೋಗುವಂತೆ ಸೂಚಿಸಿದ್ದರು! ಕೆಲವರನ್ನು ಅಲ್ಲಿಂದ ದೂಡುತ್ತಿದ್ದರು!</p>.<p>* ಮಾರ್ಗದುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಜವಾಬ್ದಾರಿಯನ್ನು ಆ ಆಯಾ ಭಾಗದ ಮುಖಂಡರಿಗೆ ವಹಿಸಲಾಗಿತ್ತು.</p>.<p>* ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆ ಪ್ರವೇಶಿಸುವ ಮಾರ್ಗ ಮಧ್ಯದಲ್ಲಿ ಮಳೆಯನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಹೆಜ್ಜೆ ಹಾಕಿದರು.</p>.<p>* ಜಿಲ್ಲೆಯಲ್ಲಿ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಮುಖಂಡ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸುವ ಜೊತೆಗೆ, ಮೇಲ್ವಿಚಾರಣೆಯನ್ನೂ ನೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಲೆ (ಮೈಸೂರು ಜಿಲ್ಲೆ):</strong> ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ತಂಡದವರಿಗೆ, ವಾಸ್ತವ್ಯಕ್ಕೆ, ಊಟ–ಉಪಾಹಾರಕ್ಕೆ, ವಿಶ್ರಾಂತಿ ಪಡೆಯುವುದಕ್ಕೆ ಮೊದಲಾದ ವ್ಯವಸ್ಥೆಯನ್ನು ಕಂಟೇನರ್ಗಳಲ್ಲೇ ಕಲ್ಪಿಸಿರುವುದು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಗಮನಸೆಳೆಯುತ್ತಿದೆ.</p>.<p>ರಸ್ತೆಯಲ್ಲಿ ಸಾಲಾಗಿ ಬರುತ್ತಿದ್ದ ಕಂಟೇನರ್ಗಳನ್ನು ನೋಡಲು ಅವರು ಮುಗಿಬಿದ್ದರು. ಒಳಗೇನಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅವರದಾಗಿತ್ತು. ಆದರೆ, ಅದನ್ನು ನಿರ್ವಹಿಸುವವರು ಅವಕಾಶ ಕೊಡಲಿಲ್ಲ.</p>.<p>* ವಿವಿಧ ಕಡೆಗಳಿಂದ ನೂರಾರು ವಾಹನಗಳು ಬಂದಿದ್ದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ಅಸ್ತವ್ಯಸ್ತವಾಯಿತು.</p>.<p>* ರಾಹುಲ್ ಮತ್ತು ನಾಯಕರ ಕೈಕುಲಕಲು ಮುಂದಾಗುತ್ತಿದ್ದ ಕಾರ್ಯಕರ್ತರನ್ನು ತಡೆಯಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.</p>.<p>* ಮಾರ್ಗದುದ್ದಕ್ಕೂ ಪಕ್ಷದ ಹಾಗೂ ಪಾದಯಾತ್ರೆಯ ವಿಶೇಷ ಧ್ವಜಗಳು ರಾರಾಜಿಸಿದವು.</p>.<p>* ಇಡೀ ಯಾತ್ರೆಯುದ್ದಕ್ಕೂ ಸಾಗಲಿರುವ ‘ಭಾರತ ಯಾತ್ರಿ’ಗಳಿಗಾಗಿ ವಿಶ್ರಾಂತಿಗೆ ವಿಶೇಷ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಹಾಸಿಗೆಗಳಲ್ಲಿ ಮಲಗಿ ಅವರು ವಿರಮಿಸಿದರು. ವೈದ್ಯಕೀಯ ಸೌಲಭ್ಯವನ್ನು ಅಲ್ಲಿ ಕಲ್ಪಿಸಲಾಗಿತ್ತು.</p>.<p>* ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ಕಳಲೆ ಗೇಟ್ ಬಳಿ ಉಪಾಹಾರ–ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಹಳ ಆಹಾರ ಪದಾರ್ಥ ವ್ಯರ್ಥವಾಯಿತು.</p>.<p>* ಪಾದಯಾತ್ರಿಗಳು ಹಾಗೂ ಮುಖಂಡರ ವಿಶ್ರಾಂತಿಗಾಗಿ ವಿಶೇಷವಾಗಿ ಟೆಂಟ್ಗಳ ಮಾಡಲಾಗಿತ್ತು. ಅಲ್ಲಿಗೆ ಕಾರ್ಯಕರ್ತರಿಗಾಗಲಿ ಅಥವಾ ಬೇರೆಯವರಿಗಾಗಲಿ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಬಿಗಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದರು. ಶಾಸಕರು, ನಾಯಕರನ್ನೂ ಪೊಲೀಸರು ತಡೆದರು!</p>.<p>* ರಾಹುಲ್ ಜೊತೆ ಹೆಜ್ಜೆ ಹಾಕಲು ಹಾಗೂ ಫೋಟೊ ತೆಗೆಸಿಕೊಳ್ಳಲು ನಾಯಕರು ಮುಗಿಬಿದ್ದರು. ರಾಹುಲ್ ಭದ್ರತಾ ಸಿಬ್ಬಂದಿಯು, ಪ್ರತಿ ನಾಯಕರಿಗೆ ಕೆಲವೇ ನಿಮಿಷಗಳ ಅವಕಾಶ ಕೊಡುತ್ತಿದ್ದರು. ಹಿಂದೆ ಹೋಗುವಂತೆ ಸೂಚಿಸಿದ್ದರು! ಕೆಲವರನ್ನು ಅಲ್ಲಿಂದ ದೂಡುತ್ತಿದ್ದರು!</p>.<p>* ಮಾರ್ಗದುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಜವಾಬ್ದಾರಿಯನ್ನು ಆ ಆಯಾ ಭಾಗದ ಮುಖಂಡರಿಗೆ ವಹಿಸಲಾಗಿತ್ತು.</p>.<p>* ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆ ಪ್ರವೇಶಿಸುವ ಮಾರ್ಗ ಮಧ್ಯದಲ್ಲಿ ಮಳೆಯನ್ನೂ ಲೆಕ್ಕಿಸದೆ ಪಾದಯಾತ್ರಿಗಳು ಹೆಜ್ಜೆ ಹಾಕಿದರು.</p>.<p>* ಜಿಲ್ಲೆಯಲ್ಲಿ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಮುಖಂಡ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸುವ ಜೊತೆಗೆ, ಮೇಲ್ವಿಚಾರಣೆಯನ್ನೂ ನೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>