ಜಯಪುರ (ಮೈಸೂರು ತಾಲ್ಲೂಕು): ಪಾನಿಪುರಿ ತಿನ್ನಲು ಕೇರಿಗೆ ಬಂದರು ಎಂಬ ಕಾರಣದಿಂದ ಜಯಪುರ ಹೋಬಳಿಯ ಅರಸಿನಕೆರೆಯಲ್ಲಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಆರು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಗ್ರಾಮದ ಮೂರ್ತಿ, ಸಚ್ಚಿನ್, ನವೀನ್, ಮಹದೇವಸ್ವಾಮಿ, ಚಂದನ್, ಸಂತೋಷ್ ಬಂಧಿತರು. ಹಲ್ಲೆಗೀಡಾದ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.