ಹುಲಿ ಪತ್ತೆ ಮಾಡಿದ್ದ ಗಣೇಶ: ‘ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಗಣೇಶ, ಅರ್ಜುನ, ಬಲರಾಮ ಮತ್ತು ಭೀಮ ಆನೆಗಳನ್ನು ಬಳಸಿ ಕೂಂಬಿಂಗ್ ನಡೆಸಿದ್ದರು. ಇಡೀ ಅರಣ್ಯದಲ್ಲಿ ಹುಡುಕಿದರೂ ಹುಲಿ ಪತ್ತೆಯಾಗಿರಲಿಲ್ಲ. ಕಲ್ಲಾರೆಕೆರೆ ಬಳಿ ಹುಲಿ ಕಳೇಬರದ ವಾಸನೆಯನ್ನು ಗಣೇಶ ಆನೆ ಗ್ರಹಿಸಿತ್ತು. ಅದನ್ನು
ಆಧರಿಸಿ ಸತ್ತ ಹುಲಿಯನ್ನು ಪತ್ತೆ ಮಾಡಲಾಗಿತ್ತು’ ಎಂದು ಸತೀಶ್ ಕುಮಾರ್ ತಿಳಿಸಿದರು.