ಮಾತು ಮೊನಚಾದರೂ ಅವರು ಹೃದಯವಂತರು, ಸುಸಂಸ್ಕೃತರು. ಸಂಸ್ಕೃತಿ, ಸಭ್ಯತೆಯ ಚೌಕಟ್ಟನ್ನು ಮೀರಿ ಎಂದಿಗೂ ಕೆಲಸ ಮಾಡಿದವರಲ್ಲ. ಬದುಕು ಕಟ್ಟಿಕೊಳ್ಳಲು ಅವರು ವೃತ್ತಿರಂಗಭೂಮಿಯನ್ನು ಅಪ್ಪಿಕೊಂಡರು. ಕೇವಲ ಹೊಟ್ಟೆಪಾಡಿಗಾಗಿ ನಾಟಕವಾಡದೇ, ಸಮಾಜ ತಿದ್ದುವಲ್ಲಿ, ದೇಶ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ಅಭಿಪ್ರಾಯಪಟ್ಟರು.