<p><strong>ಮೈಸೂರು</strong>: ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ. ಸುಶ್ರಾವ್ಯ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು. ನೃತ್ಯ, ಹಾಡು, ಚಿತ್ರ ರಚನೆ ಹೀಗೆ... ಕಲಾವಿದರಿಂದ ಕಳೆಗಟ್ಟಿದ ಪ್ರತಿಭಾ ವೇದಿಕೆ.</p>.<p>– ಈ ಸಂಭ್ರಮದ ಕ್ಷಣಗಳಿಗೆ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ಸಾಕ್ಷಿಯಾಯಿತು.</p>.<p>ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಮೂರು ದಿನಗಳವರೆಗೆ ಸ್ಪರ್ಧೆ ನಡೆಯಲಿದೆ. ಮೊದಲ ದಿನವಾದ ಗುರುವಾರ ಶಾಸ್ತ್ರೀಯ ಸಂಗೀತ, ಸ್ಥಳದಲ್ಲೇ ಚಿತ್ರ ರಚನೆ, ಜನಪದ ನೃತ್ಯ, ವ್ಯಂಗ್ಯ ಚಿತ್ರ ರಚನೆ, ರಸಪ್ರಶ್ನೆ, ಪಾಶ್ಚತ್ಯ ಸಂಗೀತ, ವೃಂದ ಗಾನ, ಜಾನಪದ ಗೀತೆ, ಲಘು ಸಂಗೀತ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.</p>.<p>ಮೈಸೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಸಭಾ ವೇದಿಕೆಯವರೆಗೆಪೂಜಾ ನೃತ್ಯ ಮತ್ತು ಡೊಳ್ಳು ಕುಣಿತ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ನಗಾರಿ ಮತ್ತು ಡೋಲಿನ ಸದ್ದಿಗೆ ವಿದ್ಯಾರ್ಥಿಗಳ ಜೊತೆಗೆ ಸಿಬ್ಬಂದಿಯೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.</p>.<p>ಉದ್ಘಾಟನೆ: ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಉದ್ಘಾಟಿಸಿ ಮಾತನಾಡಿ, ‘ಸ್ಪರ್ಧೆ ಕಲಿಯುವಿಕೆಯ ಒಂದು ಭಾಗ. ಸೋಲು–ಗೆಲುವು ಜೀವನದ ಅನೇಕ ಪಾಠಗಳನ್ನು ತಿಳಿಸುತ್ತದೆ. ಕಾಲೇಜು ಜೀವನದಲ್ಲಿ ಪಠ್ಯಗಳು ಮಾಹಿತಿ ಕಲಿಸುತ್ತವೆ. ಪಠ್ಯೇತರ ಚಟುವಟಿಕೆಗಳು ಜೀವನ ಮೌಲ್ಯಗಳನ್ನು ತಿಳಿಸುತ್ತದೆ’ ಎಂದರು.</p>.<p>ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ‘ನಾಡಿನ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದು ಇತ್ತೀಚಿನ ಚಲನಚಿತ್ರಗಳಲ್ಲಿ ಕಾಣಸಿಗುತ್ತಿದೆ. ನಮ್ಮ ಸಂಸ್ಕೃತಿ ತಿಳಿಯುವುದರೊಂದಿಗೆ, ಅವುಗಳ ಬಗ್ಗೆ ಇತರರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕು’ ಎಂದು ಆಶಿಸಿದರು.</p>.<p>‘ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿದೆ. ರಾಷ್ಟ್ರಕವಿ ಕುವೆಂಪು ಓಡಾಡಿದ ಮಣ್ಣಿನಲ್ಲಿ ಅಧ್ಯಯನ ಮಾಡುತ್ತಿರುವ ನಾವು, ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಟ ಧರ್ಮ ಕೀರ್ತಿರಾಜ್, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ, ನಿರ್ದೇಶಕಿ ಎಸ್.ಎನ್.ಸುಷ್ಮಾ, ಮಹೇಶ್ ಮಹದೇವ್, ಮಂಜು ಮಿಲನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ. ಸುಶ್ರಾವ್ಯ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು. ನೃತ್ಯ, ಹಾಡು, ಚಿತ್ರ ರಚನೆ ಹೀಗೆ... ಕಲಾವಿದರಿಂದ ಕಳೆಗಟ್ಟಿದ ಪ್ರತಿಭಾ ವೇದಿಕೆ.</p>.<p>– ಈ ಸಂಭ್ರಮದ ಕ್ಷಣಗಳಿಗೆ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ಸಾಕ್ಷಿಯಾಯಿತು.</p>.<p>ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಮೂರು ದಿನಗಳವರೆಗೆ ಸ್ಪರ್ಧೆ ನಡೆಯಲಿದೆ. ಮೊದಲ ದಿನವಾದ ಗುರುವಾರ ಶಾಸ್ತ್ರೀಯ ಸಂಗೀತ, ಸ್ಥಳದಲ್ಲೇ ಚಿತ್ರ ರಚನೆ, ಜನಪದ ನೃತ್ಯ, ವ್ಯಂಗ್ಯ ಚಿತ್ರ ರಚನೆ, ರಸಪ್ರಶ್ನೆ, ಪಾಶ್ಚತ್ಯ ಸಂಗೀತ, ವೃಂದ ಗಾನ, ಜಾನಪದ ಗೀತೆ, ಲಘು ಸಂಗೀತ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.</p>.<p>ಮೈಸೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಸಭಾ ವೇದಿಕೆಯವರೆಗೆಪೂಜಾ ನೃತ್ಯ ಮತ್ತು ಡೊಳ್ಳು ಕುಣಿತ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ನಗಾರಿ ಮತ್ತು ಡೋಲಿನ ಸದ್ದಿಗೆ ವಿದ್ಯಾರ್ಥಿಗಳ ಜೊತೆಗೆ ಸಿಬ್ಬಂದಿಯೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.</p>.<p>ಉದ್ಘಾಟನೆ: ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಉದ್ಘಾಟಿಸಿ ಮಾತನಾಡಿ, ‘ಸ್ಪರ್ಧೆ ಕಲಿಯುವಿಕೆಯ ಒಂದು ಭಾಗ. ಸೋಲು–ಗೆಲುವು ಜೀವನದ ಅನೇಕ ಪಾಠಗಳನ್ನು ತಿಳಿಸುತ್ತದೆ. ಕಾಲೇಜು ಜೀವನದಲ್ಲಿ ಪಠ್ಯಗಳು ಮಾಹಿತಿ ಕಲಿಸುತ್ತವೆ. ಪಠ್ಯೇತರ ಚಟುವಟಿಕೆಗಳು ಜೀವನ ಮೌಲ್ಯಗಳನ್ನು ತಿಳಿಸುತ್ತದೆ’ ಎಂದರು.</p>.<p>ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ‘ನಾಡಿನ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದು ಇತ್ತೀಚಿನ ಚಲನಚಿತ್ರಗಳಲ್ಲಿ ಕಾಣಸಿಗುತ್ತಿದೆ. ನಮ್ಮ ಸಂಸ್ಕೃತಿ ತಿಳಿಯುವುದರೊಂದಿಗೆ, ಅವುಗಳ ಬಗ್ಗೆ ಇತರರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕು’ ಎಂದು ಆಶಿಸಿದರು.</p>.<p>‘ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿದೆ. ರಾಷ್ಟ್ರಕವಿ ಕುವೆಂಪು ಓಡಾಡಿದ ಮಣ್ಣಿನಲ್ಲಿ ಅಧ್ಯಯನ ಮಾಡುತ್ತಿರುವ ನಾವು, ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ನಟ ಧರ್ಮ ಕೀರ್ತಿರಾಜ್, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ, ನಿರ್ದೇಶಕಿ ಎಸ್.ಎನ್.ಸುಷ್ಮಾ, ಮಹೇಶ್ ಮಹದೇವ್, ಮಂಜು ಮಿಲನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>