ಗಾಯತ್ರಿಪುರಂ ನಿವಾಸಿಗಳಾದ ಸೈಯದ್ ಸಲ್ಮಾನ್, ಆಸಿಯಾ, ಶಹಿದಾ ಬಾನು, ಸುಲ್ತಾನಾ ಶುಕ್ರವಾರ ಸಂಜೆ ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ನಾಲ್ವರು ಝರೀನ್ ತಾಜ್ ಅವರನ್ನು ತಳ್ಳಿದ್ದು ನೆಲಕ್ಕೆ ಬಿದ್ದು ತಲೆಗೆ ಏಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿತಾಯಿದಾರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.