<p>ಮೈಸೂರು: `ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿನಿಂದ ನೋಡಬೇಕು~ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.<br /> <br /> ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ವಿಸ್ಮಯ ಚಿಂತನ ಮಿಲನ ಮತ್ತು ಮೈಸೂರು ಫೋರಂ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ಉಮಾಪತಿ ಅವರ `ಒಸಾಮ ಬಿನ್ ಲಾಡೆನ್ ಭಯೋತ್ಪಾದನೆ ಮತ್ತು ಅಲ್ಖೈದಾ~ ಪುಸ್ತಕ ಲೋಕಾ ರ್ಪಣೆ ಮಾಡಿ ಮಾತನಾಡಿದರು. <br /> <br /> `ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮ ಏಜೆಂಟರಂತೆ ರಾಜಕಾರಣಿಗಳು ಬಿಂಬಿಸಿದ್ದರು. ಆದರೆ ವಿವೇಕಾನಂದರು ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಕ್ರೈಸ್ತ, ಇಸ್ಲಾಂ ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿ ನಿಂದ ನೋಡುತ್ತಿದ್ದರು. ಇದನ್ನು ಅವರೇ ಹೇಳಿಕೊಂಡಿದ್ದರು. ಭಾರತ ದಲ್ಲಿ ಹಿಂದೂ-ಮುಸಲ್ಮಾನ ಧರ್ಮ ಗಳ ಮಿಲನವಾಗಬೇಕೆಂದು ಸಹ ಹೇಳಿದ್ದರು. ಅದ್ಭುತ ಶಕ್ತಿ ಉಳ್ಳ ಧರ್ಮಗಳ ವ್ಯಾಮೋಹಕ್ಕೆ ಒಳಗಾಗಿ ಒಳಿತು ಮಾಡುವ ಜೊತೆಗೆ ಕೆಡಕು ಸಹ ಮಾಡಲಾಗಿದೆ~ ಎಂದು ತಿಳಿಸಿದರು. <br /> <br /> `ಲಾಡೆನ್ ಹತ್ಯೆ ವಿಚಾರವನ್ನು ಕುತೂಹಲಕಾರಿಯಾಗಿ ಬಣ್ಣಿಸಲಾ ಗಿದೆ. 20-30 ಪುಟಗಳನ್ನು ಕಡಿಮೆ ಮಾಡಿ ಪಠ್ಯವಾಗಿ ಮಾಡಿದರೆ ಮಕ್ಕಳಿಗೆ ಪುಸ್ತಕದ ಪರಿಚಯವಾಗು ತ್ತದೆ. ಆದರೆ ಈ ಸರ್ಕಾರದಲ್ಲಿ ಇದು ಸಾಧ್ಯ ವಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿ ಸೋಣ~ ಎಂದರು. <br /> <br /> ಪ್ರೊ.ಮುಜಾಫರ್ ಅಸ್ಸಾದಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಪಾದನ ವಿಭಾಗ ಮುಖ್ಯಸ್ಥ ಡಾ.ಕೃಷ್ಣೇಗೌಡ, ಮೈಸೂರು ಫೋರಂನ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಇದ್ದರು. ವಿಸ್ಮಯ ಚಿಂತನ ಮಿಲನ ಡಾ.ಹಾಲತಿ ಸೋಮಶೇಖರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: `ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿನಿಂದ ನೋಡಬೇಕು~ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.<br /> <br /> ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ವಿಸ್ಮಯ ಚಿಂತನ ಮಿಲನ ಮತ್ತು ಮೈಸೂರು ಫೋರಂ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ಉಮಾಪತಿ ಅವರ `ಒಸಾಮ ಬಿನ್ ಲಾಡೆನ್ ಭಯೋತ್ಪಾದನೆ ಮತ್ತು ಅಲ್ಖೈದಾ~ ಪುಸ್ತಕ ಲೋಕಾ ರ್ಪಣೆ ಮಾಡಿ ಮಾತನಾಡಿದರು. <br /> <br /> `ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮ ಏಜೆಂಟರಂತೆ ರಾಜಕಾರಣಿಗಳು ಬಿಂಬಿಸಿದ್ದರು. ಆದರೆ ವಿವೇಕಾನಂದರು ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಕ್ರೈಸ್ತ, ಇಸ್ಲಾಂ ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿ ನಿಂದ ನೋಡುತ್ತಿದ್ದರು. ಇದನ್ನು ಅವರೇ ಹೇಳಿಕೊಂಡಿದ್ದರು. ಭಾರತ ದಲ್ಲಿ ಹಿಂದೂ-ಮುಸಲ್ಮಾನ ಧರ್ಮ ಗಳ ಮಿಲನವಾಗಬೇಕೆಂದು ಸಹ ಹೇಳಿದ್ದರು. ಅದ್ಭುತ ಶಕ್ತಿ ಉಳ್ಳ ಧರ್ಮಗಳ ವ್ಯಾಮೋಹಕ್ಕೆ ಒಳಗಾಗಿ ಒಳಿತು ಮಾಡುವ ಜೊತೆಗೆ ಕೆಡಕು ಸಹ ಮಾಡಲಾಗಿದೆ~ ಎಂದು ತಿಳಿಸಿದರು. <br /> <br /> `ಲಾಡೆನ್ ಹತ್ಯೆ ವಿಚಾರವನ್ನು ಕುತೂಹಲಕಾರಿಯಾಗಿ ಬಣ್ಣಿಸಲಾ ಗಿದೆ. 20-30 ಪುಟಗಳನ್ನು ಕಡಿಮೆ ಮಾಡಿ ಪಠ್ಯವಾಗಿ ಮಾಡಿದರೆ ಮಕ್ಕಳಿಗೆ ಪುಸ್ತಕದ ಪರಿಚಯವಾಗು ತ್ತದೆ. ಆದರೆ ಈ ಸರ್ಕಾರದಲ್ಲಿ ಇದು ಸಾಧ್ಯ ವಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿ ಸೋಣ~ ಎಂದರು. <br /> <br /> ಪ್ರೊ.ಮುಜಾಫರ್ ಅಸ್ಸಾದಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಪಾದನ ವಿಭಾಗ ಮುಖ್ಯಸ್ಥ ಡಾ.ಕೃಷ್ಣೇಗೌಡ, ಮೈಸೂರು ಫೋರಂನ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಇದ್ದರು. ವಿಸ್ಮಯ ಚಿಂತನ ಮಿಲನ ಡಾ.ಹಾಲತಿ ಸೋಮಶೇಖರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>