ಸಾಗರ, ಹೊಸನಗರ ತಾಲ್ಲೂಕು ರೈತರು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಡು ಪ್ರಾಣಿಗಳು ಸಾಂಪ್ರಾದಾಯಿಕ ಬೆಳೆಗಳಾದ ಗೇರು, ಕಾಳುಮೆಣಸು, ಶುಂಠಿ, ಅಡಿಕೆ, ತೆಂಗು, ಬಾಳೆ, ಭತ್ತ, ಕಾಫಿ, ಹಣ್ಣಿನ ಬೆಳೆ, ತರಕಾರಿ, ಹೂವು ಹಾಳುಮಾಡುತ್ತಿವೆ. ಮಂಗಗಳ ಕಾಟ ಮಿತಿ ಮೀರಿದೆ. ಮಂಗಗಳು ಶೇ 10ರಷ್ಟು ತಿಂದರೆ, ಶೇ 90ರಷ್ಟು ಹಾಳುಮಾಡುತ್ತವೆ. ಅಡಿಕೆ ಮರಗಳನ್ನೂ ಬಿಡುತ್ತಿಲ್ಲ. ಸಾಂಬಾರು ಬೆಳೆಗಳು ಕೂಡ ಸಂಪೂರ್ಣ ನಾಶವಾಗುತ್ತಿವೆ ಎಂದು ಅಳಲು ತೋಡಿಕೊಂಡರು.