ಸೇವೆ ಕಾಯಂಗೊಂಡ ಕಾರ್ಮಿಕರ ಜೊತೆಗೆ ನೇರ ವೇತನ ಪಾವತಿಗೆ ಆಯ್ಕೆಯಾದ 224 ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಸಭಾಂಗಣದ ಬಳಿ ನೆರೆದಿದ್ದರು. ಅವರೆಲ್ಲ ಅಧಿಕಾರಿಗಳಿಗೆ, ಆಯುಕ್ತರಿಗೆ ಸನ್ಮಾನ ಮಾಡಲು ಹೂವಿನ ಗುಚ್ಛಗಳು, ಹಾರ, ಶಾಲುಗಳನ್ನು ಖರೀದಿಗೆ ತಂದಿದ್ದರು. ಕಾರ್ಯಕ್ರಮವೇ ನಡೆಯದ ಹಿನ್ನೆಲೆಯಲ್ಲಿ ಅವುಗಳನ್ನು ವಾಪಸ್ ತೆಗೆದುಕೊಂಡು ಹೋದರು.