ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋತ್ಸಾಹ ಧನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ

Last Updated 10 ಜನವರಿ 2020, 12:57 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಮುಂದೆಪ್ರತಿಭಟನೆ ನಡೆಸಿದರು.

ಎಂಸಿಟಿಎಸ್ ಚಟುವಟಿಕೆಗಳಿಗೆ ನಿಗದಿಯಾದ ಪ್ರೋತ್ಸಾಹಧನ ಕಳೆದ ಸೆಪ್ಟಂಬರ್‌ನಿಂದನೀಡಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ.ಒಬ್ಬೊಬ್ಬರಿಗೆ ಸರಾಸರಿ ತಿಂಗಳಿಗೆ ₨ 2,500 ನೀಡಬೇಕು. ಪ್ರತಿಯೊಬ್ಬರಿಗೂ₨37,500 ಅನುದಾನಬಾಕಿ ಇದೆ.ಇದುವರೆಗೂ ₨300ನೀಡಿದ್ದಾರೆ.ಲೆಕ್ಕಹಾಕಲು ವರ್ಷಬೇಕೆ? ಇನ್ನೆಷ್ಟು ಸಮಯಬೇಕುಎಂದುಪ್ರಶ್ನಿಸಿದರು.

ತಕ್ಷಣವೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಗೌರವಧನ ಕಡಿತ ಮಾಡಬಾರದು. ಇಲ್ಲದಿದ್ದರೆ ಕೆಲಸ ಸ್ಥಗಿತಗೊಳಿಸಿ, ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿಪ್ರೇಮಾ, ಸಲಹೆಗಾರ ಮಂಜುನಾಥ ಕುಕ್ಕವಾಡ, ಪ್ರಮುಖರಾದ ಶೀಲಾಬಾಯಿ, ಸುನೀತಾ, ಚಂದ್ರಕಲಾ, ಆಶಾ, ವಸಂತ, ಜ್ಯೋತಿಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT