ಒಂದು ವಾರ ಪ್ರತಿದಿನ ಬೆಳಗಿನ ಜಾವ 4ರಿಂದ 8.30ರವರೆಗೆ ರಾಯರ ಪಾದಪೂಜೆ, ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ, ಬೆಳಿಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೆ ಶ್ರೀಮೂಲ ರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಯ ನಂತರ ವಿದ್ವಾಂಸರಿಂದ ಕೀರ್ತನೆ, ಹಗಲು ದೀವಟಿಗೆ, ಮಂಗಳಾರತಿ, ಸ್ವಸ್ತಿ ವಾಚನ ಹಾಗೂ ಪ್ರಾಕರ ಉತ್ಸವ ನಡೆಯಲಿದೆ.