<p>ಕೇವಲ ಒಂದು ದಿನದಲ್ಲಿ ಹತ್ತಿಪ್ಪತ್ತು ಜನ ಕೂಡಿ ಪವನಪುತ್ರ ಆಂಜನೇಯನಿಗೆ ತಯಾರಿಸಿದ ಇಪ್ಪತ್ನಾಲ್ಕು ಇಂಚಿಗೂ ಉದ್ದದ ಪಾದರಕ್ಷೆಗಳು, ಒಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸವೆದು ಹೋಗುವ ವಿಸ್ಮಯಕಾರಿ ಆಚರಣೆಯೊಂದು ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ.<br /> <br /> ತುಂಗಭದ್ರಾ ನದಿಯಂಚಿನಲ್ಲಿರುವ ಗಂಗಾವತಿ ತಾಲ್ಲೂಕಿನ ಈಳಿಗೆನೂರು ಗ್ರಾಮದ ಪರಿಶಿಷ್ಟರ ದೇವರೆಂದೇ ಖ್ಯಾತಿ ಪಡೆದ ಮಾರುತಿ ದೇವಸ್ಥಾನದಲ್ಲಿ ಇಂತಹದೊಂದು ಧಾರ್ಮಿಕ ಶ್ರದ್ಧೆಯ ವಿಶಿಷ್ಟ ಆಚರಣೆ ಕಳೆದ ಹಲವು ವರ್ಷಗಳಿಂದ ನಡೆದು ಬಂದಿದೆ.<br /> <br /> ಪ್ರತಿ ಐದು ವರ್ಷಕ್ಕೊಮ್ಮೆ (ಕೆಲವೊಮ್ಮೆ ಗತ, ಅಧಿಕ ಮಾಸದಂತಹ ಸಂದರ್ಭದಲ್ಲಿ ಆರು ವರ್ಷಕ್ಕೊಮ್ಮೆ) ಮಾತ್ರ ನಡೆಯುವ ವಿಶಿಷ್ಟ ಆಚರಣೆ ಜನರ ಶ್ರದ್ಧಾನಂಬಿಕೆಗೆ ಪಾತ್ರವಾಗಿದ್ದಲ್ಲದೇ, ವೈಜ್ಞಾನಿಕ ಮನೋಭಾವದವರಿಗೂ ಸೋಜಿಗ ಉಂಟು ಮಾಡುತ್ತದೆ.<br /> <br /> <strong>ಹನುಮನ ಪಾದರಕ್ಷೆ ಪವಾಡ</strong><br /> ಪರಿಶಿಷ್ಟರ (ವಿಶೇಷವಾಗಿ ಮಾದಿಗ ಸಮುದಾಯ) ಜಾತಿಗೆ ಸೇರಿದ ಹತ್ತಿಪ್ಪತ್ತು ಮನೆತನಗಳ ದೈವಿ ಭಕ್ತಿಯುಳ್ಳ ವ್ಯಕ್ತಿಗಳು ಯುಗಾದಿ ಹಬ್ಬದ ದಿನ ಬೆಳಗಿನ ಜಾವ ನಾಲ್ಕಕ್ಕೆ ಸ್ನಾನ ಪೂಜೆ ಮುಗಿಸಿ, ಈ ಮೊದಲೇ ತಂದಿದ್ದ ಚರ್ಮವನ್ನು ಹದ ಮಾಡಿಕೊಳ್ಳುತ್ತಾರೆ. ಬಳಿಕ ದೇವಸ್ಥಾನದ ಆವರಣಕ್ಕೆ ತೆರಳಿ, ಉಪವಾಸ ವ್ರತಾಚರಣೆ ಕೈಗೊಂಡು ಬೆಳಗಿನ ನಾಲ್ಕರಿಂದ ಸಂಜೆಯ ನಾಲ್ಕರವರೆಗೆ ಆಕರ್ಷಕ ಮತ್ತು 24 ಇಂಚಿಗೂ ಉದ್ದದ ಪಾದರಕ್ಷೆಯನ್ನು ಪವನಪುತ್ರನಿಗಾಗಿ ಹೊಲೆಯುತ್ತಾರೆ.<br /> <br /> ಸಂಜೆಯೊಳಗೆ ಸಕಲ ಅಲಂಕಾರಿಕ ಪಾದರಕ್ಷೆ ತಯಾರಾಗುತ್ತದೆ. ಬಳಿಕ ಸಂಜೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಇಟ್ಟು ಬರಲಾಗುತ್ತದೆ. ಅಚ್ಚರಿ ಎಂದರೆ ಬೆಳಗಾಗುವುದರೊಳಗೆ ಪಾದರಕ್ಷೆ ಸವೆಯುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದು.</p>.<p><br /> <strong>ಒಳಿತು-ಕೆಡುಕಿನ ನಂಬಿಕೆ</strong><br /> ಹನುಮಂತ ದೇವರಿಗೆ ವಿಶೇಷ ಆಸ್ಥೆಯಿಂದ ತಯಾರಿಸಿದ ಪಾದರಕ್ಷೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೊಂಚವಾದರೂ ಸವೆದರೆ ಮಾತ್ರ ಈ ವರ್ಷ ಮತ್ತು ಮುಂದಿನ ಐದು ವರ್ಷ (ಮತ್ತೆ ಪಾದರಕ್ಷೆ ತಯಾರಿಸುವ ತನಕ) ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. <br /> <br /> `ಪಾದರಕ್ಷೆ ಸವೆಯದಿದ್ದರೆ ಬರಗಾಲ, ಮೇವಿನ ಕೊರತೆ, ಆಹಾರಕ್ಕೆ ತಾಪತ್ರಯ, ಸಂಸಾರದಲ್ಲಿ ಕಿರಿಕಿರಿ ಇರುತ್ತವೆ. ಈ ಆಚರಣೆ ಅನೇ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ~ ಎನ್ನುತ್ತಾರೆ, ಕೊಪ್ಪಳ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಮಾರೇಶ ಮುಸ್ಟೂರು. </p>.<p><br /> ಐದು ವರ್ಷಕ್ಕೊಮ್ಮೆ ನಡೆಯುವ ಈ ಪವನ ಪುತ್ರನ ಪಾದರಕ್ಷೆಯ ಪವಾಡದ ವಿದ್ಯಮಾನ ಆಸ್ತಿಕರಲ್ಲಿ ದೈವಿಭಕ್ತಿ ಹೆಚ್ಚಿಸಿದರೆ, ನಾಸ್ತಿಕರಲ್ಲಿ ಆಶ್ಚರ್ಯದ ಜೊತೆಗೆ ಸೋಜಿಗವನ್ನುಂಟು ಮಾಡಿ ಹತ್ತಾರು ಪ್ರಶ್ನೆಗಳು ತಲೆಯಲ್ಲಿ ಸುಳಿದಾಡುವಂತೆ ಮಾಡುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇವಲ ಒಂದು ದಿನದಲ್ಲಿ ಹತ್ತಿಪ್ಪತ್ತು ಜನ ಕೂಡಿ ಪವನಪುತ್ರ ಆಂಜನೇಯನಿಗೆ ತಯಾರಿಸಿದ ಇಪ್ಪತ್ನಾಲ್ಕು ಇಂಚಿಗೂ ಉದ್ದದ ಪಾದರಕ್ಷೆಗಳು, ಒಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸವೆದು ಹೋಗುವ ವಿಸ್ಮಯಕಾರಿ ಆಚರಣೆಯೊಂದು ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ.<br /> <br /> ತುಂಗಭದ್ರಾ ನದಿಯಂಚಿನಲ್ಲಿರುವ ಗಂಗಾವತಿ ತಾಲ್ಲೂಕಿನ ಈಳಿಗೆನೂರು ಗ್ರಾಮದ ಪರಿಶಿಷ್ಟರ ದೇವರೆಂದೇ ಖ್ಯಾತಿ ಪಡೆದ ಮಾರುತಿ ದೇವಸ್ಥಾನದಲ್ಲಿ ಇಂತಹದೊಂದು ಧಾರ್ಮಿಕ ಶ್ರದ್ಧೆಯ ವಿಶಿಷ್ಟ ಆಚರಣೆ ಕಳೆದ ಹಲವು ವರ್ಷಗಳಿಂದ ನಡೆದು ಬಂದಿದೆ.<br /> <br /> ಪ್ರತಿ ಐದು ವರ್ಷಕ್ಕೊಮ್ಮೆ (ಕೆಲವೊಮ್ಮೆ ಗತ, ಅಧಿಕ ಮಾಸದಂತಹ ಸಂದರ್ಭದಲ್ಲಿ ಆರು ವರ್ಷಕ್ಕೊಮ್ಮೆ) ಮಾತ್ರ ನಡೆಯುವ ವಿಶಿಷ್ಟ ಆಚರಣೆ ಜನರ ಶ್ರದ್ಧಾನಂಬಿಕೆಗೆ ಪಾತ್ರವಾಗಿದ್ದಲ್ಲದೇ, ವೈಜ್ಞಾನಿಕ ಮನೋಭಾವದವರಿಗೂ ಸೋಜಿಗ ಉಂಟು ಮಾಡುತ್ತದೆ.<br /> <br /> <strong>ಹನುಮನ ಪಾದರಕ್ಷೆ ಪವಾಡ</strong><br /> ಪರಿಶಿಷ್ಟರ (ವಿಶೇಷವಾಗಿ ಮಾದಿಗ ಸಮುದಾಯ) ಜಾತಿಗೆ ಸೇರಿದ ಹತ್ತಿಪ್ಪತ್ತು ಮನೆತನಗಳ ದೈವಿ ಭಕ್ತಿಯುಳ್ಳ ವ್ಯಕ್ತಿಗಳು ಯುಗಾದಿ ಹಬ್ಬದ ದಿನ ಬೆಳಗಿನ ಜಾವ ನಾಲ್ಕಕ್ಕೆ ಸ್ನಾನ ಪೂಜೆ ಮುಗಿಸಿ, ಈ ಮೊದಲೇ ತಂದಿದ್ದ ಚರ್ಮವನ್ನು ಹದ ಮಾಡಿಕೊಳ್ಳುತ್ತಾರೆ. ಬಳಿಕ ದೇವಸ್ಥಾನದ ಆವರಣಕ್ಕೆ ತೆರಳಿ, ಉಪವಾಸ ವ್ರತಾಚರಣೆ ಕೈಗೊಂಡು ಬೆಳಗಿನ ನಾಲ್ಕರಿಂದ ಸಂಜೆಯ ನಾಲ್ಕರವರೆಗೆ ಆಕರ್ಷಕ ಮತ್ತು 24 ಇಂಚಿಗೂ ಉದ್ದದ ಪಾದರಕ್ಷೆಯನ್ನು ಪವನಪುತ್ರನಿಗಾಗಿ ಹೊಲೆಯುತ್ತಾರೆ.<br /> <br /> ಸಂಜೆಯೊಳಗೆ ಸಕಲ ಅಲಂಕಾರಿಕ ಪಾದರಕ್ಷೆ ತಯಾರಾಗುತ್ತದೆ. ಬಳಿಕ ಸಂಜೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಇಟ್ಟು ಬರಲಾಗುತ್ತದೆ. ಅಚ್ಚರಿ ಎಂದರೆ ಬೆಳಗಾಗುವುದರೊಳಗೆ ಪಾದರಕ್ಷೆ ಸವೆಯುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದು.</p>.<p><br /> <strong>ಒಳಿತು-ಕೆಡುಕಿನ ನಂಬಿಕೆ</strong><br /> ಹನುಮಂತ ದೇವರಿಗೆ ವಿಶೇಷ ಆಸ್ಥೆಯಿಂದ ತಯಾರಿಸಿದ ಪಾದರಕ್ಷೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೊಂಚವಾದರೂ ಸವೆದರೆ ಮಾತ್ರ ಈ ವರ್ಷ ಮತ್ತು ಮುಂದಿನ ಐದು ವರ್ಷ (ಮತ್ತೆ ಪಾದರಕ್ಷೆ ತಯಾರಿಸುವ ತನಕ) ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. <br /> <br /> `ಪಾದರಕ್ಷೆ ಸವೆಯದಿದ್ದರೆ ಬರಗಾಲ, ಮೇವಿನ ಕೊರತೆ, ಆಹಾರಕ್ಕೆ ತಾಪತ್ರಯ, ಸಂಸಾರದಲ್ಲಿ ಕಿರಿಕಿರಿ ಇರುತ್ತವೆ. ಈ ಆಚರಣೆ ಅನೇ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ~ ಎನ್ನುತ್ತಾರೆ, ಕೊಪ್ಪಳ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಮಾರೇಶ ಮುಸ್ಟೂರು. </p>.<p><br /> ಐದು ವರ್ಷಕ್ಕೊಮ್ಮೆ ನಡೆಯುವ ಈ ಪವನ ಪುತ್ರನ ಪಾದರಕ್ಷೆಯ ಪವಾಡದ ವಿದ್ಯಮಾನ ಆಸ್ತಿಕರಲ್ಲಿ ದೈವಿಭಕ್ತಿ ಹೆಚ್ಚಿಸಿದರೆ, ನಾಸ್ತಿಕರಲ್ಲಿ ಆಶ್ಚರ್ಯದ ಜೊತೆಗೆ ಸೋಜಿಗವನ್ನುಂಟು ಮಾಡಿ ಹತ್ತಾರು ಪ್ರಶ್ನೆಗಳು ತಲೆಯಲ್ಲಿ ಸುಳಿದಾಡುವಂತೆ ಮಾಡುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>