ಜನಾಂದೋಲನ ಮಹಾಮೈತ್ರಿ ಅಭ್ಯರ್ಥಿ ಆರ್.ಮಾನಸಯ್ಯ ಮಾತನಾಡಿ, ‘ಮೂರು ದಶಕಕ್ಕೂ ಹೆಚ್ಚು ವರ್ಷ ಹೋರಾಟದ ಬದುಕು ಕಟ್ಟಿಕೊಂಡು ಬಂದಿರುವೆ. ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಲು ಹೋಗಿ ಜೈಲುವಾಸ ಅನುಭವಿಸಿರುವೆ. ಜನರು ಆಶೀರ್ವದಿಸಿದಲ್ಲಿ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವೆ. ಗುತ್ತಿಗೆ ಆಧಾರಿತ ಕೂಲಿಕಾರರ ಕಾಯಂ, ದಲಿತ, ಅಲ್ಪಸಂಖ್ಯಾತ, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹಾಗೂ ಲಂಚ ಮುಕ್ತ ಮತ್ತು ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವುದಾಗಿ’ ಭರವಸೆ ನೀಡಿದರು.