35 ವರ್ಷದ ಹಿಂದೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಉಳಿದ ಜಮೀನು ಪತ್ತೆ ಹಚ್ಚುವಂತೆ ಸಿಬ್ಬಂದಿಗೆ ಸೂಚಿಸಿದ್ದೆ. ಈಗ ಸುಮಾರು ₹8ಕೋಟಿ ಮೌಲ್ಯದ ಜಮೀನು ದೊರಕಿದೆ. ನಿವೇಶನಗಳನ್ನು ಹರಾಜು ಪ್ರಕ್ರಿಯೆ ನಡೆಯಿಸಿ ಬಂದ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ವಿನಿಯೋಗಿಸಲಾಗುವುದು
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ನಮ್ಮ ಸಿಬ್ಬಂದಿ 8.24 ಗುಂಟೆ ಹೆಚ್ಚುವರಿಯಾಗಿ ಖಾಲಿ ಉಳಿದ ಜಮೀನು ಪತ್ತೆ ಹಚ್ಚಿದ್ದಾರೆ. ಭೂಮಿ ಸಮತಟ್ಟು ಮಾಡುವ ಕಾರ್ಯ ಸಾಗಿದೆ. ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ದೊರೆತ ತಕ್ಷಣ ಪ್ಲಾಟ್ ನಿರ್ಮಿಸಲಾಗುವುದು.