ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ವೇದ ಉಪನಿಷತ್ತು ಕಲಿಯಲು ವಿದ್ಯಾರ್ಥಿಗಳಲ್ಲಿ ವಿಶೇಷ ಶ್ರದ್ಧೆ ಇರಬೇಕು. ಹೆಚ್ಚಿನ ಅಧ್ಯಾಯದಲ್ಲಿ ತೊಡಗಬೇಕು. ನಾಲ್ಕು ಜನ ವಿದ್ಯಾರ್ಥಿಗಳು ವೇದ ಉಪನಿಷತ್ ಅಧ್ಯಯನ ಮಾಡಿದ್ದಾರೆ. ಚಂದ್ರಿಕಾ ಗ್ರಂಥಕ್ಕೆ ಎಂಟು ವಾಕ್ಯಗಳು ಮಂಡನೆ ಮಾಡಿದ್ದಾರೆ. ನ್ಯಾಯಸುಧಾ ಮಂಗಳಕ್ಕೆ ಹತ್ತು ವಾಕ್ಯಗಳು ಮಂಡಿಸುವರು ಎಂದು ತಿಳಿಸಿದರು.