<p>ರಾಯಚೂರು: ತಾಲ್ಲೂಕಿನ ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂರು ಗ್ರಾಮದ ಸರ್ಕಾರಿ ಜಾಮೀನು ಪ್ರಭಾವಿಗಳು ಒತ್ತುವರಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.</p>.<p>ಬಾಪುರು ಗ್ರಾಮದ ಸರ್ವೆ ನಂಬರ್ 30ರ 5.8 ಎಕರೆ, ಸರ್ವೆ ನಂಬರ್ 48 ರ 17.28 ಎಕರೆ ಸರ್ವೆ ನಂಬರ್ 128ರ 7.35 ಹಾಗೂ ಸರ್ವೆ ನಂಬರ್ 47ರ 2 ಗುಂಟೆ ಜಮೀನು ಸರ್ಕಾರದ್ದಾಗಿದೆ. 1998–99 ನೇ ಸಾಲಿನಲ್ಲಿ ಸರ್ವೆ ನಂಬರ್ 30 ರ 2 ಎಕರೆ ಜಾಗವನ್ನು ಅಂದಿನ ಜಿಲ್ಲಾಧಿಕಾರಿ ರುದ್ರಭೂಮಿ ಮಂಜೂರಿಗೆ ಆದೇಶ ನೀಡಿದ್ದರು. ಆದರೆ ಇದು ಉಳಿದಿಲ್ಲ ಎಂದು ತಿಳಿಸಿದರು.</p>.<p>ಪೋತಲ ಗೋವಿಂದ ಎಂಬುವವರು ಜಾಗವನ್ನು ನಿವೇಶನವನ್ನಾಗಿ ಮಾಡಿ ಮಾರಾಟ ಮಾಡಿದ್ದಾರೆ. ಸರ್ವೆ ನಂಬರ್ 48ರ 17.28 ಎಕರೆ ಜಾಗವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾಬಣ್ಣ ಒತ್ತುವರಿ ಮಾಡಿ ಮನೆ ನಿರ್ಮಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.</p>.<p>ಪ್ರಭಾವಿಯಾಗಿರುವುದರಿಂದ ಇವರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿಕೊಂಡ ಜಾಗ ವಶಪಡಿಸಿಕೊಳ್ಳಬೇಕು. ರುದ್ರಭೂಮಿಗೆ ನೀಡಿದ ಜಾಗ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನಿವೇಶನ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದಿನ್ನಿ, ಹನುಮಂತು, ಉರುಕುಂದು, ನರಸಿಂಹಲು, ಮುದ್ದಪ್ಪ, ತಿಮ್ಮಪ್ಪ, ಗುರುಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ತಾಲ್ಲೂಕಿನ ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂರು ಗ್ರಾಮದ ಸರ್ಕಾರಿ ಜಾಮೀನು ಪ್ರಭಾವಿಗಳು ಒತ್ತುವರಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.</p>.<p>ಬಾಪುರು ಗ್ರಾಮದ ಸರ್ವೆ ನಂಬರ್ 30ರ 5.8 ಎಕರೆ, ಸರ್ವೆ ನಂಬರ್ 48 ರ 17.28 ಎಕರೆ ಸರ್ವೆ ನಂಬರ್ 128ರ 7.35 ಹಾಗೂ ಸರ್ವೆ ನಂಬರ್ 47ರ 2 ಗುಂಟೆ ಜಮೀನು ಸರ್ಕಾರದ್ದಾಗಿದೆ. 1998–99 ನೇ ಸಾಲಿನಲ್ಲಿ ಸರ್ವೆ ನಂಬರ್ 30 ರ 2 ಎಕರೆ ಜಾಗವನ್ನು ಅಂದಿನ ಜಿಲ್ಲಾಧಿಕಾರಿ ರುದ್ರಭೂಮಿ ಮಂಜೂರಿಗೆ ಆದೇಶ ನೀಡಿದ್ದರು. ಆದರೆ ಇದು ಉಳಿದಿಲ್ಲ ಎಂದು ತಿಳಿಸಿದರು.</p>.<p>ಪೋತಲ ಗೋವಿಂದ ಎಂಬುವವರು ಜಾಗವನ್ನು ನಿವೇಶನವನ್ನಾಗಿ ಮಾಡಿ ಮಾರಾಟ ಮಾಡಿದ್ದಾರೆ. ಸರ್ವೆ ನಂಬರ್ 48ರ 17.28 ಎಕರೆ ಜಾಗವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾಬಣ್ಣ ಒತ್ತುವರಿ ಮಾಡಿ ಮನೆ ನಿರ್ಮಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.</p>.<p>ಪ್ರಭಾವಿಯಾಗಿರುವುದರಿಂದ ಇವರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿಕೊಂಡ ಜಾಗ ವಶಪಡಿಸಿಕೊಳ್ಳಬೇಕು. ರುದ್ರಭೂಮಿಗೆ ನೀಡಿದ ಜಾಗ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನಿವೇಶನ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದಿನ್ನಿ, ಹನುಮಂತು, ಉರುಕುಂದು, ನರಸಿಂಹಲು, ಮುದ್ದಪ್ಪ, ತಿಮ್ಮಪ್ಪ, ಗುರುಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>