ಮುದಗಲ್: ಸಮೀಪದ ಪಿಕಳಿಹಾಳ ಗ್ರಾಮದ ಹೊರವಲಯದಲ್ಲಿ ಕರಡಿಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಮುದಗಲ್ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ಕರಡಿ ಉಪದ್ರವ ನೀಡಿತ್ತು. ಸಾರ್ವಜನಿಕರು ಆತಂಕಗೊಂಡಿದ್ದರು. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಕಳೆದ ಎರಡು ತಿಂಗಳುಗಳಿಂದ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿಯಲು ಬೋನು ಇಟ್ಟು ಅದನ್ನು ಆಗಾಗ್ಗೆ ಸ್ಥಳಾಂತರಿಸುತ್ತಿದ್ದರು. ಕೊನೆಗೂ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕರಡಿಯನ್ನು ಸ್ಥಳಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಚನ್ನಬಸವರಾಜ ಕಟ್ಟಿಮನಿ, ಉಪ ಅರಣ್ಯ ವಲಯಾಧಿಕಾರಿ ಹುಸೇನ್ ಬಾಷಾ, ಹುಲ್ಲಪ್ಪ ಮಜ್ಜಗಿ ಹಾಗೂ ಹುಚ್ಚಪ್ಪ ಕುಂಬಾರ ಭಾಗವಹಿಸಿದ್ದರು.