ಗೋಪಿ ಹೋಗಿಬಂಡಿ (28) ಮೃತ ಯುವಕ. ಮೊಹರಂ ಹಬ್ಬದ ಅಂಗವಾಗಿ ಮುಳ್ಳೂರು ಗ್ರಾಮಕ್ಕೆ ತೆರಳಿದ್ದ. ಹಬ್ಬ ಮುಗಿಸಿಕೊಂಡು ಸೋಮವಾರ ರಾತ್ರಿ 2ರ ಸುಮಾರಿಗೆ ಬೈಕ್ ಮೇಲೆ ಸಿಂಧನೂರಿಗೆ ಬರುವಾಗ ವಾಹನವೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯೊಂಡು ಸ್ಥಳದಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.