ಲಿಂಗಸುಗೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಲ್ಲಿನ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ. ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಅಯ್ಯಪ್ಪ ಮಾಳೂರು, ಗೋವಿಂದ ನಾಯಕ, ಸಣ್ಣ ಸಿದ್ದಯ್ಯ, ಮುದಕಪ್ಪ ನಾಯಕ, ಶ್ವೇತಾ ಲಾಲಗುಂದಿ, ಶೋಭಾ ಕಾಟ್ವೆ, ಜಯಶ್ರೀ ಸಕ್ರಿ, ಜ್ಯೋತಿ ಸುಂಕದ ಸೇರಿದಂತೆ ವಿವಿಧ ಭಾಗಗಳ ಮುಖಂಡರು ಇದ್ದರು.