ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಸಾಹಿತ್ಯ ಎನ್ನುವುದು ಮಲ್ಲಿಗೆ ಇದ್ದಂತೆ. ಅದು ಪರಿಮಳ ಸೂಸುತ್ತದೆ. ಸಿದ್ದನಗೌಡರು ರಚಿಸಿದ ಈ ಕೃತಿಯಲ್ಲಿ ಲೋಕಾನುಭವ ಇದ್ದು, ಇದೊಂದು ಪರಿಪಕ್ವ ಕೃತಿಯಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿ ಮಠ ಅವರು ಕೃತಿ ಪರಿಚಯ ಮಾಡಿದರು.ಮನ್ಸಲಾಪುರದ ವೇ. ಮೂ. ಶಿವಾನಂದಯ್ಯ ಹಿರೇಮಠ, ಸುರಭಿ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಜಿ.ಬಸವರಾಜ, ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ ಹಾಗೂ ಮತ್ತಿತರರು ಇದ್ದರು.