<p><strong>ರಾಯಚೂರು</strong>: ಜಿಲ್ಲೆಯಾದ್ಯಂತ ಅನೇಕ ಸಾಹಿತಿಗಳು, ಕವಿಗಳು, ಪಂಡಿತರು ಇದ್ದಾರೆ. ಅವರನ್ನು ಗುರುತಿಸುವ ಕಾರ್ಯ ನಡೆಯಬೇಕು. ಕವಿಗಳನ್ನು ಗುರುತಿಸದೆ ಇರುವುದರಿಂದ ಅನೇಕರು ಮರೆಯಾಗಿದ್ದಾರೆ. ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.</p>.<p>ನಗರದ ಕನ್ನಡ ಭವನದಲ್ಲಿ ಭಾನುವಾರ ಸುರಭಿ ಸಾಂಸ್ಕೃತಿಕ ಬಳಗ ಆಯೋಜಿಸಿದ್ದ ಹಿರಿಯ ಕವಿ ಸಿದ್ದನಗೌಡ ಮಾಲಿಪಾಟೀಲ ಅವರ ‘ಸೌಂದರ್ಯ ಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಇಂದು ಅಂತರ್ಜಾಲದ ಹಾವಳಿಯಿಂದಾಗಿ ಮದುವೆ ಎಂಬ ಪವಿತ್ರ ಸಂಬಂಧ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿ ಪ್ರೇಮದ ಬೆಲೆ ತಿಳಿಯದೇ ಅನೇಕ ದುರಂತಗಳು ಸಂಭವಿಸುತ್ತಿವೆ. ಯುವ ಪೀಳಿಗೆಗೆ ಬುದ್ಧಿವಾದ ಹೇಳಿದರೆ ಹಿರಿಯರು ಪೆಡಂಭೂತವಾಗಿ ಕಾಣುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಸಿದ್ದನಗೌಡ ಈ ಕೃತಿಯ ಮೂಲಕ ಸಾಹಿತ್ಯಕ್ಕೆ ಮತ್ತು ಗೃಹಸ್ಥಾಶ್ರಮಿಗಳಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಗೌಡರು ಈಗಾಗಲೇ ಮೂರು ಕೃತಿಗಳನ್ನು ರಚಿಸಿದ್ದು, ಇನ್ನು ಹೆಚ್ಚಿನ ಕೃತಿಗಳನ್ನು ರಚಿಸಲಿ’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಸಾಹಿತ್ಯ ಎನ್ನುವುದು ಮಲ್ಲಿಗೆ ಇದ್ದಂತೆ. ಅದು ಪರಿಮಳ ಸೂಸುತ್ತದೆ. ಸಿದ್ದನಗೌಡರು ರಚಿಸಿದ ಈ ಕೃತಿಯಲ್ಲಿ ಲೋಕಾನುಭವ ಇದ್ದು, ಇದೊಂದು ಪರಿಪಕ್ವ ಕೃತಿಯಾಗಿದೆ ಎಂದು ತಿಳಿಸಿದರು.<br />ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿ ಮಠ ಅವರು ಕೃತಿ ಪರಿಚಯ ಮಾಡಿದರು.ಮನ್ಸಲಾಪುರದ ವೇ. ಮೂ. ಶಿವಾನಂದಯ್ಯ ಹಿರೇಮಠ, ಸುರಭಿ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಜಿ.ಬಸವರಾಜ, ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ ಹಾಗೂ ಮತ್ತಿತರರು ಇದ್ದರು.</p>.<p>ರೇಣುಕಾದೇವಿ ಪ್ರಾರ್ಥಿಸಿದರು. ಈರಣ್ಣಬೆಂಗಾಲಿ ಸ್ವಾಗತಿ ಸಿದರು. ಮಂಜುನಾಥ ನಿರೂಪಿಸಿದರು. ರುದ್ರಯ್ಯ ಗುಣಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಜಿಲ್ಲೆಯಾದ್ಯಂತ ಅನೇಕ ಸಾಹಿತಿಗಳು, ಕವಿಗಳು, ಪಂಡಿತರು ಇದ್ದಾರೆ. ಅವರನ್ನು ಗುರುತಿಸುವ ಕಾರ್ಯ ನಡೆಯಬೇಕು. ಕವಿಗಳನ್ನು ಗುರುತಿಸದೆ ಇರುವುದರಿಂದ ಅನೇಕರು ಮರೆಯಾಗಿದ್ದಾರೆ. ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.</p>.<p>ನಗರದ ಕನ್ನಡ ಭವನದಲ್ಲಿ ಭಾನುವಾರ ಸುರಭಿ ಸಾಂಸ್ಕೃತಿಕ ಬಳಗ ಆಯೋಜಿಸಿದ್ದ ಹಿರಿಯ ಕವಿ ಸಿದ್ದನಗೌಡ ಮಾಲಿಪಾಟೀಲ ಅವರ ‘ಸೌಂದರ್ಯ ಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಇಂದು ಅಂತರ್ಜಾಲದ ಹಾವಳಿಯಿಂದಾಗಿ ಮದುವೆ ಎಂಬ ಪವಿತ್ರ ಸಂಬಂಧ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿ ಪ್ರೇಮದ ಬೆಲೆ ತಿಳಿಯದೇ ಅನೇಕ ದುರಂತಗಳು ಸಂಭವಿಸುತ್ತಿವೆ. ಯುವ ಪೀಳಿಗೆಗೆ ಬುದ್ಧಿವಾದ ಹೇಳಿದರೆ ಹಿರಿಯರು ಪೆಡಂಭೂತವಾಗಿ ಕಾಣುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಸಿದ್ದನಗೌಡ ಈ ಕೃತಿಯ ಮೂಲಕ ಸಾಹಿತ್ಯಕ್ಕೆ ಮತ್ತು ಗೃಹಸ್ಥಾಶ್ರಮಿಗಳಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಗೌಡರು ಈಗಾಗಲೇ ಮೂರು ಕೃತಿಗಳನ್ನು ರಚಿಸಿದ್ದು, ಇನ್ನು ಹೆಚ್ಚಿನ ಕೃತಿಗಳನ್ನು ರಚಿಸಲಿ’ ಎಂದು ಸಲಹೆ ನೀಡಿದರು.</p>.<p>ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಸಾಹಿತ್ಯ ಎನ್ನುವುದು ಮಲ್ಲಿಗೆ ಇದ್ದಂತೆ. ಅದು ಪರಿಮಳ ಸೂಸುತ್ತದೆ. ಸಿದ್ದನಗೌಡರು ರಚಿಸಿದ ಈ ಕೃತಿಯಲ್ಲಿ ಲೋಕಾನುಭವ ಇದ್ದು, ಇದೊಂದು ಪರಿಪಕ್ವ ಕೃತಿಯಾಗಿದೆ ಎಂದು ತಿಳಿಸಿದರು.<br />ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿ ಮಠ ಅವರು ಕೃತಿ ಪರಿಚಯ ಮಾಡಿದರು.ಮನ್ಸಲಾಪುರದ ವೇ. ಮೂ. ಶಿವಾನಂದಯ್ಯ ಹಿರೇಮಠ, ಸುರಭಿ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಜಿ.ಬಸವರಾಜ, ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ ಹಾಗೂ ಮತ್ತಿತರರು ಇದ್ದರು.</p>.<p>ರೇಣುಕಾದೇವಿ ಪ್ರಾರ್ಥಿಸಿದರು. ಈರಣ್ಣಬೆಂಗಾಲಿ ಸ್ವಾಗತಿ ಸಿದರು. ಮಂಜುನಾಥ ನಿರೂಪಿಸಿದರು. ರುದ್ರಯ್ಯ ಗುಣಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>