ಗುರುವಾರ ಹೇಳಿಕೆ ನೀಡಿರುವ ಟಿಯುಸಿಐ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಗಂಗಾಧರ್, ‘ದೇಶದ, ದುಡಿಯುವ ವರ್ಗ ಹಾಗೂ ಸಂವಿಧಾನದ ಹಿತಾಸಕ್ತಿಗೆ ಧಕ್ಕೆ ತರುವ ಸಿಎಎ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಹೋರಾಟ ನಡೆಸಬೇಕು. ಇದು ಮುಸ್ಲಿಮರಿಗೆ ಪೌರತ್ವ ನಿರಾಕರಿಸುವ, ಮುಸ್ಲಿಂ ವಿರೋಧಿ ದ್ವೇಷವನ್ನು ಯೋಜನೆಬದ್ಧವಾಗಿ ಹರಡುವ, ಬಹುಸಂಖ್ಯಾತ ಹಿಂದೂಗಳ ಹೆಸರಲ್ಲಿ ಬ್ರಾಹ್ಮಣವಾದಿ ರಾಜಕಾರಣ ಮಾಡುವ ಹಿಂದುತ್ವ ಫ್ಯಾಸಿಸ್ಟ್ ಕುತಂತ್ರವನ್ನು ಭಾರತದ ಜನ ಈಗಲಾದರೂ ಅತ್ಯಂತ ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.