ರಾಯಚೂರು: ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾರ್ಟರ್ಸ್ನಲ್ಲಿ ಮಹಿಳಾ ಕಾನ್ಸ್ಟೆಬಲ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ್ಸ್ಟೆಬಲ್ ಮಹಾದೇವಿ ಅವರ ಮನೆಯಲ್ಲಿ ಮೇ 23ರಂದು ₹10 ಲಕ್ಷ ನಗದು ಕಳ್ಳತನ ಮಾಡಿದ್ದರು. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅದೇ ಕ್ವಾರ್ಟರ್ಸ್ನಲ್ಲಿ ಸೂಪೈರ್ ವೈಸರ್ ಆಗಿದ್ದ ವಿಶ್ವನಾಥ, ಫ್ಲಂಬರ್ ಮಹೇಶ, ಪಿ.ಗೋವಿಂದನನ್ನು 12 ಗಂಟೆಯಲ್ಲಿಯೇ ಬಂಧಿಸಿ, ಆರೋಪಿಗಳಿಂದ ₹8.7 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ, ಪಿಎಸ್ಐ ಅಮಿತಾ, ಚಂದ್ರಪ್ಪ ಸಿಬ್ಬಂದಿ ಅಮರೇಶ, ಗುರುಸ್ವಾಮಿ, ಪ್ರವೀಣ, ಹನುಮಂತರಾಯ, ಶರಣಬಸವ ಇದ್ದರು.