ರಾಯಚೂರು: ಲಾಕ್ಡೌನ್ ಬಿಗಿಯಾಗಿ ಜಾರಿಗೊಳಿಸಲು ಮುಂದಾಗಿರುವ ಪೊಲೀಸರು 10 ಗಂಟೆ ಮುಗಿಯುತ್ತಿದ್ದಂತೆಅನಗತ್ಯವಾಗಿ ಸಂಚರಿಸುವವರ ಮೇಲೆ ಲಾಠಿ ಪ್ರಯೋಗ ಆರಂಭಿಸಿದ್ದಾರೆ.
ಮಳಿಗೆಗಳ ಎದುರು ನಿಂತುಕೊಂಡಿದ್ದ ಜನರು ಪೊಲೀಸರ ವಿಜಿಲ್ ಸದ್ದು ಕೇಳಿ ಚದುರಿಕೊಂಡು ಮನೆಯತ್ತ ಓಟ ಆರಂಭಿಸಿದ್ದಾರೆ. ಕೈಗೆ ಸಿಕ್ಕವರನ್ನು ವಿಚಾರಿಸಿ ಬೈಕ್ ವಶಕ್ಕೆ ಪಡೆಯುತ್ತಿದ್ದು, ದಂಡ ವಿಧಿಸುತ್ತಿದ್ದಾರೆ.
ರಾಯಚೂರು ನಗರದ ತಿನ್ ಕಂದಿಲ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಗಂಜ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಸ್ಟೇಷನ್ ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ, ಪರಿಶೀಲನೆ ಮಾಡುತ್ತಿದ್ದಾರೆ.