ರಾಯಚೂರು: ಜಿಲ್ಲೆಯ ಮಸ್ಕಿವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಾಲಾಪುರದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಶನಿವಾರ ಸಾವನ್ನಪ್ಪಿದ್ದು, ಮುನ್ನಾದಿನ ಮೃತನೊಂದಿಗೆ ಜಗಳವಾಡಿದ್ದ ವ್ಯಕ್ತಿಯೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನಾಗಪ್ಪ ನಾಯಕ (48) ಮೃತವ್ಯಕ್ತಿ. ಮದ್ಯದ ಅಮಲಿನಲ್ಲಿ ಇರುತ್ತಿದ್ದ ನಾಗಪ್ಪ ಗ್ರಾಮದ ಬೀದಿಗಳಲ್ಲಿ ವಿನಾಕಾರಣ ಜನರ ಮೇಲೆ ರೇಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಿದ್ದ ವ್ಯಕ್ತಿಯು ಶುಕ್ರವಾರ ರಾತ್ರಿ ನಾಗಪ್ಪನ ಕಾಲಿಗೆ ಹೊಡೆದಿದ್ದ ಎನ್ನಲಾಗಿದೆ. ಕವಿತಾಳ ಠಾಣೆ ಪೊಲೀಸರು ಪರಿಶೀಲಿಸಿದ್ದು, ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ