ಕಲ್ಯಾಣ ಕರ್ನಾಟಕ ಶಂಕರನಾಗ್ ಆಟೊ ಚಾಲಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಫಿ ಮಾತನಾಡಿ, ದೇವದುರ್ಗ ಪಟ್ಟಣದಲ್ಲಿ 300ಕ್ಕೂ ಹೆಚ್ಚು ಆಟೊರಿಕ್ಷಗಳಿದ್ದು ಎಲ್ಲಿಂದರಲ್ಲಿ ರಸ್ತೆಯ ಮೇಲೆ ನಿಲ್ಲಿಸುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಪಟ್ಟಣದ ಮುಖ್ಯ ಕೇಂದ್ರ ಸ್ಥಾನಗಳಾದ ಅಂಬೇಡ್ಕರ್ ಸರ್ಕಲ್, ಸಾರ್ವಜನಿಕ ಆಸ್ಪತ್ರೆ, ತಹಶೀಲ್ದಾರ್ ಕಾರ್ಯಾಲಯ, ಬಸವೇಶ್ವರ ವೃತ್ತ ಗಾಂಧಿ ಚೌಕ್ ಮತ್ತು ಬಾಬು ಜಗಜೀವನ್ ರಾಮ್ ಸರ್ಕಲ್ ಬಳಿ ಪ್ರತ್ಯೇಕ ಆಟೊ ನಿಲ್ದಾಣಗಳನ್ನು ಸ್ಥಾಪಿಸಿ ಅನುಕೂಲ ಮಾಡಿ ಕೊಡುವಂತೆ ಮನವಿ ಮಾಡಿದರು.