‘ಡಾ.ಬಿ.ವಿ.ಪಾಟೀಲ ಅವರು ತಮ್ಮ ಪುತ್ರ ವಿನಯ ಪಾಟೀಲ ಅವರಿಗೆ ಕೃಷಿ ಕೋಟಾದಡಿ ಬಿಎಸ್ಸಿ–ಕೃಷಿ ಪದವಿಗೆ ಅಕ್ರಮ ಪ್ರವೇಶ ಪಡೆದಿರುವುದು ವಿಶ್ವವಿದ್ಯಾಲಯದಿಂದ ಒದಗಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಪಷ್ಟವಾಗಿದೆ. ಹೈಕೋರ್ಟ್ ಆದೇಶ ಅನುಸರಿಸಿ, ತಕ್ಷಣವೇ ವಿದ್ಯಾರ್ಥಿಗೆ ನೀಡಿರುವ ಪ್ರಮಾಣಪತ್ರಗಳನ್ನು ರದ್ದುಪಡಿಸಬೇಕು ಹಾಗೂ ಪದವಿ ಹಂತದಲ್ಲಿ ಮಾಡಿರುವ ವೆಚ್ಚ ಭರಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.