ಬೆಂಗಳೂರು: ‘ಭಾರತದಲ್ಲಿ ಫುಟ್ಬಾಲ್ ಕ್ರೀಡೆಯು ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕೆಂದರೆ ವೃತ್ತಿಪರ ಫುಟ್ಬಾಲ್ ಅಕಾಡೆಮಿಗಳ ಅಗತ್ಯವಿದೆ. ಯುವಕರಿಗೆ ಉನ್ನತ ಸೌಲಭ್ಯಗಳು ಸಿಗುವಂತಾಗಬೇಕು. ಉತ್ತಮ ಫುಟ್ಬಾಲ್ ಆಟಗಾರನಾಗಬೇಕೆಂಬ ಆಸೆ ಇರುವ ಎಲ್ಲ ಆಸಕ್ತರಿಗೂ ಆರ್ಎಫ್ಸಿ ಸ್ಥಾಪಿಸಿರುವ ವಸತಿಯುತ ಫುಟ್ಬಾಲ್ ಅಕಾಡೆಮಿಯಿಂದ ಅನುಕೂಲವಾಗಲಿದೆ’ ಎಂದು ಭಾರತ ಫುಟ್ಬಾಲ್ ತಂಡದ ಉಪನಾಯಕ ಗುರ್ಪ್ರೀತ್ ಸಿಂಗ್ ಸಂಧು ಹೇಳಿದರು.