ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಬಸಾಪುರದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ 5ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಅನಿಲಕುಮಾರ ತಿಮ್ಮಪ್ಪ (11) ಮೃತ ಬಾಲಕ.ಸರ್ಕಾರಿ ಶಾಲೆಯ ಕೋಣೆಗಳ ಮೇಲೆ ಮಳೆ ನೀರು ಸಂಗ್ರಹವಾಗಿತ್ತು. ಚಾವಣಿ ಸ್ವಚ್ಛ ಮಾಡಲು ಬಾಲಕ ತೆರಳಿದ್ದ. ಈ ವೇಳೆ ಕೈಗೆಟುಕುವಂತಿದ್ದ ವಿದ್ಯುತ್ ತಂತಿ ಸ್ಪರ್ಶವಾಯಿತು.
ವಿದ್ಯುತ್ ಆಘಾತದಿಂದಅಸ್ವಸ್ಥವಾಗಿದ್ದ ವಿದ್ಯಾರ್ಥಿಯನ್ನು ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟ.