ಈ ಕುರಿತು ಮಾಹಿತಿ ನೀಡಿರುವ ರೈತರಾದ ಮಲ್ಲಪ್ಪ ನೆಲಕೊಳ, ಯಲ್ಲಪ್ಪ ಪೂಜಾರಿ ಮತ್ತು ಬಸಪ್ಪ ಅವರು, ’ಅಮೀನಗಡ, ಕಾಚಾಪುರ, ಯತಗಲ್ ಮತ್ತು ನೆಲಕೊಳ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಅಂದಾಜು 200 ಎಕರೆ ತೊಗರಿ ಬೆಳೆ ಬೆಳೆದಿದ್ದಾರೆ. ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ‘ ಎಂದು ದೂರಿದರು.