ಆಯಾ ತಾಲ್ಲೂಕು ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿಯೂ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಯಚೂರು ತಾಲ್ಲಕು ಕಚೇರಿಯಲ್ಲಿ ರಾಂಪುರ, ಹೊಸೂರು, ವಡವಟ್ಟಿ, ಅಸ್ಕಿಹಾಳ ಸೇರಿ ಹಲವು ಗ್ರಾಮಗಳಿಂದ ಸುಮಾರು 200
ರೈತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ನಯೀಮ್ ಹುಸೇನ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದೀಪಾ ಎಲ್., ಎಸ್.ಎಂ. ಅಧಿಕಾರಿ ಶರಣಮ್ಮ, ನಾಗರೆಡ್ಡಿ, ಸಿದ್ದಾರೆಡ್ಡಿ, ರೆಹಮಾನ್, ಮೇಘನಾ, ಕೆ.ಎಸ್.ಎಸ್.ಸಿ.ಯ ಪ್ರಭು ತುರಾಯಿ ಹಾಗೂ ಇತರರು ಇದ್ದರು.