ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಕಿಟ್ಗಳನ್ನು ವಿತರಿಸಿದರು. ಆನಂತರ ಮಾತನಾಡಿದ ಅವರು, ಲಾಕ್ಡೌನ್ನಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಮನೆಮನೆಗೂ ಪತ್ರಿಕೆಗಳನ್ನು ತಲುಪಿಸುವ ಕೆಲಸ ಶ್ಲಾಘನೀಯ. ಪೌಂಡೇಷನ್ ಮೂಲಕ ಇಂಥವರಿಗೆ ನೆರವು ಒದಗಿಸುವುದರಿಂದ ಅನುಕೂಲವಾಗಲಿದೆ ಎಂದರು.
130 ಕ್ಕೂ ಹೆಚ್ಚು ವಿತರಕರು ಕಿಟ್ಗಳನ್ನು ಪಡೆದುಕೊಂಡರು.
ನಗರಸಭೆ ಸದಸ್ಯರಾದ ಜಯಣ್ಣ, ಸಾಜೀದ್ ಸಮೀರ, ಮೊಹ್ಮದ್ ಶಾಲಂ, ಬಿ.ರಮೇಶ, ಅಸ್ಲಂ ಪಾಷಾ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಆರ್.ಗುರುನಾಥ ಇದ್ದರು.