<p><strong>ರಾಯಚೂರು: </strong>ಕಣ್ಣುಗಳು ದೇಹದ ಮುಖ್ಯ ಅಂಗವಾಗಿದ್ದು, ಮರಣದ ಬಳಿಕ ಕಣ್ಣುಗಳು ಮಣ್ಣುಪಾಲು ಮಾಡದೆ ದಾನ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಿರಿಯ ನಾಗರಿಕರ ಸಂಘದ ಸದಸ್ಯ ಮಹಾದೇವಪ್ಪ ಹೇಳಿದರು.</p>.<p>ನಗರದ ಸುಗುಣ ಶಿಕ್ಷಣ ಸಂಸ್ಥೆ ಹಾಗೂ ಆಸ್ಥಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಿಂದ ಹಿರಿಯ ನಾಗರಿಕ ಸಂಘದ ಸದಸ್ಯರಿಗೆ ಹಾಗೂ ಸರ್ವಜನಿಕರಿಗೆ ನಿಜಲಿಂಗಪ್ಪ ಕಾಲೋನಿಯ ಎಟಿಎಂ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಜೀವನದಲ್ಲಿ ಪ್ರತಿಯೊಂದು ಕೆಲಸವನ್ನು ಮಾಡಬೇಕಾದರೇ ಕಣ್ಣು ಮಖ್ಯ ಪಾತ್ರವಹಿಸುತ್ತದೆ. ಕಣ್ಣಿನ ರಕ್ಷಣೆ ‘ನಿಮ್ಮ ಹೊಣೆ ಎನ್ನುವ ಶಿರ್ಷಿಕೆ’ಯಲ್ಲಿ ನಾವೆಲ್ಲರು ಕಣ್ಣನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಣ್ಣು ಪಾಲು ಮಾಡದೆ ದಾನ ಮಾಡಬೇಕು ಎಂದು ತಿಳಿಸಿದರು.</p>.<p>ನಂತರ ಸುಗುಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಲಿತಾ.ಎಂ. ಬಸವನಗೌಡ ಮಾತನಾಡಿ, ‘ನಮ್ಮ ಸಂಸ್ಥೆಯು ಗ್ರಾಮಾಂತರ ಭಾಗಗಳಿಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.</p>.<p>ಡಾ. ಶಿಲ್ಪಾ ಅವರು 150 ಜನರ ಕಣ್ಣುಗಳನ್ನು ತಪಾಸಣೆ ಮಾಡಿದರು. ಹಿರಿಯ ನಾಗರಿಕ ಸಂಘದ ಸದಸ್ಯರು ಇದ್ದರು. ನಂದಿನಿ ನರ್ಸಿಂಗ್ ಮಾಹವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಾಯಲ ಆಪ್ಟಿಕಲ್ಸ್ನ ಶ್ರೀ ವಿಠಲ ಅವರು ಗಣಕೀಕೃತ ತಪಾಸಣೆ ತಪಾಸಣೆ ನಡೆಸಿದರು.</p>.<p>ಬಸವಶ್ರೀ ಶಾಲೆಯ ಸ್ಕೌಟ್ಸ್ ಹಾಗೂ ಶಿಕ್ಷಕರು ಸೇವೆಯನ್ನು ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಕಣ್ಣುಗಳು ದೇಹದ ಮುಖ್ಯ ಅಂಗವಾಗಿದ್ದು, ಮರಣದ ಬಳಿಕ ಕಣ್ಣುಗಳು ಮಣ್ಣುಪಾಲು ಮಾಡದೆ ದಾನ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಿರಿಯ ನಾಗರಿಕರ ಸಂಘದ ಸದಸ್ಯ ಮಹಾದೇವಪ್ಪ ಹೇಳಿದರು.</p>.<p>ನಗರದ ಸುಗುಣ ಶಿಕ್ಷಣ ಸಂಸ್ಥೆ ಹಾಗೂ ಆಸ್ಥಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಿಂದ ಹಿರಿಯ ನಾಗರಿಕ ಸಂಘದ ಸದಸ್ಯರಿಗೆ ಹಾಗೂ ಸರ್ವಜನಿಕರಿಗೆ ನಿಜಲಿಂಗಪ್ಪ ಕಾಲೋನಿಯ ಎಟಿಎಂ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಜೀವನದಲ್ಲಿ ಪ್ರತಿಯೊಂದು ಕೆಲಸವನ್ನು ಮಾಡಬೇಕಾದರೇ ಕಣ್ಣು ಮಖ್ಯ ಪಾತ್ರವಹಿಸುತ್ತದೆ. ಕಣ್ಣಿನ ರಕ್ಷಣೆ ‘ನಿಮ್ಮ ಹೊಣೆ ಎನ್ನುವ ಶಿರ್ಷಿಕೆ’ಯಲ್ಲಿ ನಾವೆಲ್ಲರು ಕಣ್ಣನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಣ್ಣು ಪಾಲು ಮಾಡದೆ ದಾನ ಮಾಡಬೇಕು ಎಂದು ತಿಳಿಸಿದರು.</p>.<p>ನಂತರ ಸುಗುಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಲಿತಾ.ಎಂ. ಬಸವನಗೌಡ ಮಾತನಾಡಿ, ‘ನಮ್ಮ ಸಂಸ್ಥೆಯು ಗ್ರಾಮಾಂತರ ಭಾಗಗಳಿಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.</p>.<p>ಡಾ. ಶಿಲ್ಪಾ ಅವರು 150 ಜನರ ಕಣ್ಣುಗಳನ್ನು ತಪಾಸಣೆ ಮಾಡಿದರು. ಹಿರಿಯ ನಾಗರಿಕ ಸಂಘದ ಸದಸ್ಯರು ಇದ್ದರು. ನಂದಿನಿ ನರ್ಸಿಂಗ್ ಮಾಹವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಾಯಲ ಆಪ್ಟಿಕಲ್ಸ್ನ ಶ್ರೀ ವಿಠಲ ಅವರು ಗಣಕೀಕೃತ ತಪಾಸಣೆ ತಪಾಸಣೆ ನಡೆಸಿದರು.</p>.<p>ಬಸವಶ್ರೀ ಶಾಲೆಯ ಸ್ಕೌಟ್ಸ್ ಹಾಗೂ ಶಿಕ್ಷಕರು ಸೇವೆಯನ್ನು ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>