<p><strong>ರಾಯಚೂರು</strong>: ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಇಂದಿರಾ ಕ್ಯಾಂಟಿನ್ಗಳಲ್ಲಿ ಗುರುವಾರದಿಂದ ಊಟ, ಉಪಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ.</p>.<p>ನಿರ್ಗತಿಕರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಆಹಾರ ನೀಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡು ಮೂರು ದಿನಗಳ ಬಳಿಕ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ದೇವದುರ್ಗದಲ್ಲಿ ಮೂರು ದಿನಗಳ ಹಿಂದೆಯೇ ಆಹಾರ ಉಚಿತವಾಗಿ ನೀಡುವುದಕ್ಕೆ ಆರಂಭಿಸಲಾಗಿದೆ.</p>.<p>‘ಸರ್ಕಾರವು ಸೂಚನೆ ನೀಡಿದ್ದನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ನಮ್ಮ ಗಮನಕ್ಕೆ ತರಲಿಲ್ಲ. ಸೂಚನಾ ಪತ್ರ ನೀಡುವುದು ತಾಡವಾದರೂ ಪರವಾಗಿಲ್ಲ. ಮೌಖಿಕವಾಗಿಯಾದರೂ ತಿಳಿಸಿದ್ದರೆ, ಅದೇ ದಿನದಿಂದ ಉಚಿತ ಆಹಾರ ಕೊಡುತ್ತಿದ್ದೇವು. ಗುರುವಾರದಿಂದ ಆದೇಶ ಪಾಲನೆ ಆಗುತ್ತಿದೆ’ ಎಂದು ಕ್ಯಾಂಟಿನ್ ಉಸ್ತುವಾರಿ ವಹಿಸಿಕೊಂಡವರು ತಿಳಿಸಿದರು.</p>.<p>ಎಂದಿನಂತೆ ಇಂದಿರಾ ಕ್ಯಾಂಟಿನ್ಗಳಲ್ಲಿ ಬೆಳಿಗ್ಗೆ 7.30 ರಿಂದ ಉಪಹಾರ ಆರಂಭವಾಗುತ್ತದೆ. ಮಧ್ಯಾಹ್ನ ಊಟ 12.30 ರಿಂದ ಆರಂಭಿಸಲಾಗುತ್ತದೆ ಹಾಗೂ ರಾತ್ರಿ ಊಟ 7 ರಿಂದ ಶುರುವಾಗುತ್ತದೆ. 500 ಜನರಿಗೆ ಉಪಹಾರ ಹಾಗೂ ಊಟ ನೀಡಲಾಗುತ್ತದೆ. ಸದ್ಯ ಲಾಕ್ಡೌನ್ ಇರುವುದರಿಂದ ಉಪಹಾರಕ್ಕೆ ಮಾತ್ರ 500 ಜನರು ಹಾಜರಾಗುತ್ತಿದ್ದಾರೆ. ಮಧ್ಯಾಹ್ನ 400 ರಿಂದ 500 ಜನರು ಊಟ ಮಾಡುತ್ತಿದ್ದರೆ, ರಾತ್ರಿ ಊಟಕ್ಕೆ 200 ರಿಂದ 300 ಜನರು ಬರುತ್ತಿದ್ದಾರೆ.</p>.<p>‘ಪ್ರತಿದಿನ ಗೋಶಾಲೆಯಲ್ಲಿ ಗೋವುಗಳಿಗೆ ಬಿಸಾಕಿದ ತರಕಾರಿ–ಹಣ್ಣು ಹಾಕುತ್ತೇನೆ. ಇದಕ್ಕೆ ಮಾಸಿಕ ₹8 ಸಾವಿರ ಕೂಲಿ ಕೊಡ್ತಾರೆ. ಟಾಟಾ ಏಸ್ ಮೂಲಕ ಮಾರ್ಕೆಟ್ನಿಂದ ಗೋಶಾಲೆಗೆ ಸಾಗಿಸುತ್ತೇನೆ. ಕೆಲಸದ ವೇಳೆ ಮಧ್ಯಾಹ್ನ ಕೇಂದ್ರ ಬಸ್ ನಿಲ್ದಾಣ ಪಕ್ಕದ ಇಂದಿರಾ ಕ್ಯಾಂಟಿನ್ನಲ್ಲಿಯೇ ಊಟ ಮಾಡುತ್ತಿದ್ದೇನೆ’ ಎಂದು ಗೋಶಾಲೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಅರಬ್ ಮೊಹಲ್ಲಾ ನಿವಾಸಿ ನಾಸೀರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಇಂದಿರಾ ಕ್ಯಾಂಟಿನ್ಗಳಲ್ಲಿ ಗುರುವಾರದಿಂದ ಊಟ, ಉಪಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ.</p>.<p>ನಿರ್ಗತಿಕರಿಗೆ ಹಾಗೂ ಕಾರ್ಮಿಕರಿಗೆ ಉಚಿತ ಆಹಾರ ನೀಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡು ಮೂರು ದಿನಗಳ ಬಳಿಕ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ದೇವದುರ್ಗದಲ್ಲಿ ಮೂರು ದಿನಗಳ ಹಿಂದೆಯೇ ಆಹಾರ ಉಚಿತವಾಗಿ ನೀಡುವುದಕ್ಕೆ ಆರಂಭಿಸಲಾಗಿದೆ.</p>.<p>‘ಸರ್ಕಾರವು ಸೂಚನೆ ನೀಡಿದ್ದನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳು ನಮ್ಮ ಗಮನಕ್ಕೆ ತರಲಿಲ್ಲ. ಸೂಚನಾ ಪತ್ರ ನೀಡುವುದು ತಾಡವಾದರೂ ಪರವಾಗಿಲ್ಲ. ಮೌಖಿಕವಾಗಿಯಾದರೂ ತಿಳಿಸಿದ್ದರೆ, ಅದೇ ದಿನದಿಂದ ಉಚಿತ ಆಹಾರ ಕೊಡುತ್ತಿದ್ದೇವು. ಗುರುವಾರದಿಂದ ಆದೇಶ ಪಾಲನೆ ಆಗುತ್ತಿದೆ’ ಎಂದು ಕ್ಯಾಂಟಿನ್ ಉಸ್ತುವಾರಿ ವಹಿಸಿಕೊಂಡವರು ತಿಳಿಸಿದರು.</p>.<p>ಎಂದಿನಂತೆ ಇಂದಿರಾ ಕ್ಯಾಂಟಿನ್ಗಳಲ್ಲಿ ಬೆಳಿಗ್ಗೆ 7.30 ರಿಂದ ಉಪಹಾರ ಆರಂಭವಾಗುತ್ತದೆ. ಮಧ್ಯಾಹ್ನ ಊಟ 12.30 ರಿಂದ ಆರಂಭಿಸಲಾಗುತ್ತದೆ ಹಾಗೂ ರಾತ್ರಿ ಊಟ 7 ರಿಂದ ಶುರುವಾಗುತ್ತದೆ. 500 ಜನರಿಗೆ ಉಪಹಾರ ಹಾಗೂ ಊಟ ನೀಡಲಾಗುತ್ತದೆ. ಸದ್ಯ ಲಾಕ್ಡೌನ್ ಇರುವುದರಿಂದ ಉಪಹಾರಕ್ಕೆ ಮಾತ್ರ 500 ಜನರು ಹಾಜರಾಗುತ್ತಿದ್ದಾರೆ. ಮಧ್ಯಾಹ್ನ 400 ರಿಂದ 500 ಜನರು ಊಟ ಮಾಡುತ್ತಿದ್ದರೆ, ರಾತ್ರಿ ಊಟಕ್ಕೆ 200 ರಿಂದ 300 ಜನರು ಬರುತ್ತಿದ್ದಾರೆ.</p>.<p>‘ಪ್ರತಿದಿನ ಗೋಶಾಲೆಯಲ್ಲಿ ಗೋವುಗಳಿಗೆ ಬಿಸಾಕಿದ ತರಕಾರಿ–ಹಣ್ಣು ಹಾಕುತ್ತೇನೆ. ಇದಕ್ಕೆ ಮಾಸಿಕ ₹8 ಸಾವಿರ ಕೂಲಿ ಕೊಡ್ತಾರೆ. ಟಾಟಾ ಏಸ್ ಮೂಲಕ ಮಾರ್ಕೆಟ್ನಿಂದ ಗೋಶಾಲೆಗೆ ಸಾಗಿಸುತ್ತೇನೆ. ಕೆಲಸದ ವೇಳೆ ಮಧ್ಯಾಹ್ನ ಕೇಂದ್ರ ಬಸ್ ನಿಲ್ದಾಣ ಪಕ್ಕದ ಇಂದಿರಾ ಕ್ಯಾಂಟಿನ್ನಲ್ಲಿಯೇ ಊಟ ಮಾಡುತ್ತಿದ್ದೇನೆ’ ಎಂದು ಗೋಶಾಲೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಅರಬ್ ಮೊಹಲ್ಲಾ ನಿವಾಸಿ ನಾಸೀರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>