ರಾಯಚೂರು: ಹಾಸನ-ಸೋಲ್ಲಾಪುರ ರೈಲಿನ ಮೂಲಕ ಕಲಬುರ್ಗಿ, ಯಾದಗಿರಿ ಹಾಗೂ ಸೋಲ್ಲಾಪುರಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರಾಯಚೂರು ನಿಲ್ದಾಣದಲ್ಲೇ ಪರದಾಡುವಂತಾಗಿದೆ.
ಎಇ ಹುದ್ದೆಯ ಪರೀಕ್ಷೆ ತಪ್ಪಿಸಿಕೊಂಡವರು ಬೆಳಿಗ್ಗೆ 8.45 ರಿಂದ ರಾಯಚೂರಿನಲ್ಲೇ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
'ರೈಲ್ವೆ ಬಿಡುತ್ತಾರೆ ಎಂದು ಕಾದು ಕುಳಿತು ಎರಡು ತಾಸು ಆಯಿತು. ಆಗಲೇ ಯಾದಗಿರಿ ತಲುಪಬೇಕಿತ್ತು. ಏನು ಮಾಡಬೇಕು ಗೊತ್ತಾಗುತ್ತಿಲ್ಲ' ಎಂದು ಬೆಂಗಳೂರಿನಿಂದ ಯಾದಗಿರಿಗೆ ತೆರಳಬೇಕಿರುವ ಹನುಮಂತ ತಮ್ಮ ಪರದಾಟ ವ್ಯಕ್ತಪಡಿಸಿದರು.