<p><strong>ಹಟ್ಟಿ ಚಿನ್ನದ ಗಣಿ:</strong> ಹಟ್ಟಿ ಪಟ್ಟಣ ಸುತ್ತ 30ಕ್ಕೂ ಹೆಚ್ಚು ಗ್ರಾಮಗಳಿಗೆ, ವ್ಯಾಪಾರ ಕೇಂದ್ರವಾಗಿದ್ದು, ಈಗಿರುವ ಗುರುಗುಂಟಾ, ಹೋಬಳಿ ಕೇಂದ್ರವು ದೂರವಾಗುತ್ತಿದ್ದು, ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಜಿಲ್ಲಾಡಳಿ ಹಿಂದೇಟು ಹಾಕುತ್ತಿದೆ.</p>.<p>2017ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧೀನ ಜಿಲ್ಲಾಧಿಕಾರಿಗಳಿಗೆ ಹೋಸ ಹೋಬಳಿ ರಚನೆಗೆ ಇರುವ ನಿಯಮ ಮಾನದಂಡಗಳ ಪ್ರಕಾರ ವರದಿ ನೀಡುವಂತೆ ಪತ್ರ ಬರೆದಿದ್ದರು, 6 ವರ್ಷ ಕಳೆದರು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ಈಗಿನ ಶಾಸಕರು ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.</p>.<p>ಪಟ್ಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ಮುಖಂಡ ಮೌಲಸಬ್ 2016ರಲ್ಲಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ತನ್ವೀರ್ ಶೇಠ್ ಹಾಗೂ ಅಂದಿನ ಕಂದಾಯ ಮಂತ್ರಿ ತಿಮ್ಮಪ್ಪನವರಿಗೆ ಪತ್ರ ಬರೆದಿದ್ದರು.</p>.<p>ತನ್ವೀರ್ ಶೇಠ್ ಮನವಿ ಮೇರಗೆ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ನಿರ್ಧರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.</p>.<p>ರೋಡಲಬಂಡ (ತ), ಕಡ್ಡೋಣಿ, ಮೇಧಿನಾಪುರ,ಕೋಠಾ, ವೀರಪುರ, ಗೆಜ್ಜಲಟ್ಟಾ, ಚಿಕ್ಕಹೆಸರೂರು, ಚಿಕ್ಕನಗನೂರು, ಆನ್ವರಿ, ಗುಡುದನಾಳ, ಹೋಸುರು, ಚುಕನಟ್ಟಿ, ಸೇರಿದಂತೆ ವಿವಿದ ಗ್ರಾಮಗಳನ್ನು ಜನಸಂಖ್ಯೆ ಬೌಗೋಳಿಕ, ಕ್ಷೇತ್ರದ ಮೂಲಕ ಹೋಸ ಹೋಬಳಿ ಕೇಂದ್ರಕ್ಕೆ ಒಳಗಾಗಬಹುದು ಎಂದು ಗ್ರಾಮಗಳ ವರದಿ ನೀಡಲಾಗಿತ್ತು.</p>.<p>ಅಧಿಕಾರಿಗಳು ಮೇಲಿಂದ ಮೇಲೆ ಮನವಿ ಪತ್ರ ನೀಡಿದರು, 27-10-2016 ರಂದು ಅಂದಿನ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಯಚೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. </p>.<p>ಹೋಬಳಿ ರಚನೆಗೆ ಇರುವ ಮಾನದಂಡ, ಪ್ರಯೋಜನಗಳ ಬಗ್ಗೆ, ವೆಚ್ಚ ವಿವಿರಗಳನ್ನು ಪ್ರಸ್ತಾಪಿಸಿ, ಹೊಸ ಕಚೇರಿಗಳ ಆರಂಭಕ್ಕೆ ಜಮೀನಿನ ವಿವರ, ಜನಸಂಖ್ಯೆ, ಗ್ರಾಮಗಳ ವಿವಿರ, ಮೂಲ ಮತ್ತು ಪ್ರಸ್ತಾಪಿತ ಹೋಬಳಿಗಳ ಬೌಗೋಳಿಕತ್ವ ವಿಸ್ತಿರ್ಣದೊಂದಿಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದರು.</p>.<p>ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಲು ಹಿಂದೇಟು ಹಾಕುತ್ತಿದೆ. ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಟ್ಟಣ ಹಿಂದುಳಿದಿದೆ ಎನ್ನುವುದು ಜನರ ಮಾತು.</p>.<p>ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರಮಾಡುವುದು ಜನರ ಬೇಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುವುದು.</p><p><strong>- ಮಾನಪ್ಪ ವಜ್ಜಲ್ ಶಾಸಕ ಲಿಂಗಸುಗೂರು</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಹಟ್ಟಿ ಪಟ್ಟಣ ಸುತ್ತ 30ಕ್ಕೂ ಹೆಚ್ಚು ಗ್ರಾಮಗಳಿಗೆ, ವ್ಯಾಪಾರ ಕೇಂದ್ರವಾಗಿದ್ದು, ಈಗಿರುವ ಗುರುಗುಂಟಾ, ಹೋಬಳಿ ಕೇಂದ್ರವು ದೂರವಾಗುತ್ತಿದ್ದು, ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಜಿಲ್ಲಾಡಳಿ ಹಿಂದೇಟು ಹಾಕುತ್ತಿದೆ.</p>.<p>2017ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧೀನ ಜಿಲ್ಲಾಧಿಕಾರಿಗಳಿಗೆ ಹೋಸ ಹೋಬಳಿ ರಚನೆಗೆ ಇರುವ ನಿಯಮ ಮಾನದಂಡಗಳ ಪ್ರಕಾರ ವರದಿ ನೀಡುವಂತೆ ಪತ್ರ ಬರೆದಿದ್ದರು, 6 ವರ್ಷ ಕಳೆದರು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ಈಗಿನ ಶಾಸಕರು ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.</p>.<p>ಪಟ್ಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ಮುಖಂಡ ಮೌಲಸಬ್ 2016ರಲ್ಲಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ತನ್ವೀರ್ ಶೇಠ್ ಹಾಗೂ ಅಂದಿನ ಕಂದಾಯ ಮಂತ್ರಿ ತಿಮ್ಮಪ್ಪನವರಿಗೆ ಪತ್ರ ಬರೆದಿದ್ದರು.</p>.<p>ತನ್ವೀರ್ ಶೇಠ್ ಮನವಿ ಮೇರಗೆ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ನಿರ್ಧರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.</p>.<p>ರೋಡಲಬಂಡ (ತ), ಕಡ್ಡೋಣಿ, ಮೇಧಿನಾಪುರ,ಕೋಠಾ, ವೀರಪುರ, ಗೆಜ್ಜಲಟ್ಟಾ, ಚಿಕ್ಕಹೆಸರೂರು, ಚಿಕ್ಕನಗನೂರು, ಆನ್ವರಿ, ಗುಡುದನಾಳ, ಹೋಸುರು, ಚುಕನಟ್ಟಿ, ಸೇರಿದಂತೆ ವಿವಿದ ಗ್ರಾಮಗಳನ್ನು ಜನಸಂಖ್ಯೆ ಬೌಗೋಳಿಕ, ಕ್ಷೇತ್ರದ ಮೂಲಕ ಹೋಸ ಹೋಬಳಿ ಕೇಂದ್ರಕ್ಕೆ ಒಳಗಾಗಬಹುದು ಎಂದು ಗ್ರಾಮಗಳ ವರದಿ ನೀಡಲಾಗಿತ್ತು.</p>.<p>ಅಧಿಕಾರಿಗಳು ಮೇಲಿಂದ ಮೇಲೆ ಮನವಿ ಪತ್ರ ನೀಡಿದರು, 27-10-2016 ರಂದು ಅಂದಿನ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಯಚೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. </p>.<p>ಹೋಬಳಿ ರಚನೆಗೆ ಇರುವ ಮಾನದಂಡ, ಪ್ರಯೋಜನಗಳ ಬಗ್ಗೆ, ವೆಚ್ಚ ವಿವಿರಗಳನ್ನು ಪ್ರಸ್ತಾಪಿಸಿ, ಹೊಸ ಕಚೇರಿಗಳ ಆರಂಭಕ್ಕೆ ಜಮೀನಿನ ವಿವರ, ಜನಸಂಖ್ಯೆ, ಗ್ರಾಮಗಳ ವಿವಿರ, ಮೂಲ ಮತ್ತು ಪ್ರಸ್ತಾಪಿತ ಹೋಬಳಿಗಳ ಬೌಗೋಳಿಕತ್ವ ವಿಸ್ತಿರ್ಣದೊಂದಿಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದರು.</p>.<p>ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಲು ಹಿಂದೇಟು ಹಾಕುತ್ತಿದೆ. ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಟ್ಟಣ ಹಿಂದುಳಿದಿದೆ ಎನ್ನುವುದು ಜನರ ಮಾತು.</p>.<p>ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರಮಾಡುವುದು ಜನರ ಬೇಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುವುದು.</p><p><strong>- ಮಾನಪ್ಪ ವಜ್ಜಲ್ ಶಾಸಕ ಲಿಂಗಸುಗೂರು</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>