ರಾಯಚೂರು: ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗೆ ಒಂದು ತಾಸು ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ವಾಹನ ಸಂಚರಿಸುವ ರಸ್ತೆಗಳು ಕಾಲುವೆಯಂತಾಗಿವೆ.
ಮಸ್ಕಿ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ರಾತ್ರಿ ಕೂಡಾ ಮಳೆ ಸುರಿದಿದೆ. ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಪಟ್ಟಣದಲ್ಲಿ ಕಚ್ಚಾರಸ್ತೆಗಳು ಕೆರೆಗಳಂತಾಗಿವೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ದೇವದುರ್ಗ ಬಸ್ ನಿಲ್ದಾಣ ಪಕ್ಕದ ರಾಜಕಾಲುವೆ ಭರ್ತಿಯಾಗಿ ನಿಲ್ದಾಣದೊಳಗೆ ನುಗ್ಗಿದ್ದರಿಂದ ಪ್ರಯಣಿಕರು ಹೊರಬರಲು ಮತ್ತು ನಿಲ್ದಾಣದೊಳಗೆ ಹೋಗಲು ಪರದಾಡುವಂತಾಗಿದೆ.