ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜೆಜೆಎಂ ಕಾಮಗಾರಿ ಕಳಪೆಯಾದ ಬಗ್ಗೆ ದೂರು; ತನಿಖಾ ತಂಡ ರಚನೆಗೆ ಶಾಸಕ ಬಾದರ್ಲಿ ಸೂಚನೆ

Published : 6 ಮೇ 2025, 14:06 IST
Last Updated : 6 ಮೇ 2025, 14:06 IST
ಫಾಲೋ ಮಾಡಿ
Comments
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿರುವುದು
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿರುವುದು
‘ಕುಡಿಯುವ ನೀರಿನ ಸಮಸ್ಯೆಗೆ ಪಿಡಿಒಗಳೇ ನೇರ ಹೊಣೆ’
ಸಭೆಯ ಆರಂಭದಲ್ಲಿ ಒಂದೊಂದೇ ಗ್ರಾ.ಪಂ ಪಿಡಿಒಗಳನ್ನು ಎಬ್ಬಿಸಿ ಪಂಚಾಯಿತಿ ವ್ಯಾಪ್ತಿರುವ ಕೆರೆಗಳಲ್ಲಿರುವ ನೀರಿನ ಸಂಗ್ರಹ ಬೋರ್‍ವೆಲ್ ಆರ್‌ೊ ಪ್ಲಾಂಟ್‍ಗಳ ಕುರಿತು ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ಪಡೆದರು. ಕೆಲ ಪಿಡಿಓಗಳು ಶೇ35 ಶೇ60 ಶೇ80 ರಷ್ಟು ನೀರು ಕೆರೆಗಳಲ್ಲಿ ಸಂಗ್ರಹವಿದೆ ಎಂದರು. ಜೂನ್ ಅಂತ್ಯದವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಸಮಸ್ಯೆಯಾದರೆ ನಿಮ್ಮನ್ನೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜೂನ್ ಮೊದಲ ಆರಂಭದಲ್ಲಿ ಕಾಲುವೆಗೆ ನೀರು ಹರಿಸಿದರೆ ಕೆರೆಯನ್ನು ತುಂಬಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಎಲ್ಲ ಪಿಡಿಒಗಳು ಶಾಸಕರಿಗೆ ತಿಳಿಸಿದರು. ಗಾಂಧಿನಗರ ಪಿಡಿಒ ಯಾರೆಂದು ಶಾಸಕರು ಕೇಳಿದಾಗ ಸಭೆಯಲ್ಲಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಶಾಸಕರು ಸಭೆಗೆ ಯಾರು ಬಂದಿದ್ದಾರೆಂದು ಹಾಜರಾತಿ ತೆಗೆದುಕೊಳ್ಳುವುದಿಲ್ಲವೇ ಎಂದು ದೂರಿದರು. ನಂತರ ಸಭೆಯ ಮಧ್ಯದಲ್ಲಿ ಬಂದ ಗಾಂಧಿನಗರ ಪಿಡಿಒ ಹನೀಫ್ ಅವರನ್ನು ‘ಎಲ್ಲಿಗೆ ಹೋಗಿದೆಪ್ಪ’ ಎಂದು ಶಾಸಕರು ಕೇಳಿದಾಗ ಗಾಂಧಿನಗರ ವಾರ್ಡ್ ನಂ.1 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿತ್ತು. ಅಲ್ಲಿಗೆ ಹೋಗಿದ್ದೆ ಎಂದು ಹೇಳಿ ಸಭೆಯಲ್ಲಿ ಕುಳಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT