ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಬೇಡ’

Last Updated 1 ನವೆಂಬರ್ 2021, 11:58 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ‘ಕನ್ನಡ ಭಾಷೆ ಕುರಿತು ಕೀಳರಿಮೆ ಬೇಡ. ಕನ್ನಡ ನಾಡು–ನುಡಿಗೆ ತನ್ನದೆ ಆದ ಇತಿಹಾಸ ಇದೆ’ ಎಂದು ಗಣಿ ಕಂಪನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ಹೇಳಿದರು.

ಹಟ್ಟಿಗಣಿ ಕಂಪನಿ ವತಿಯಿಂದ ಧಾರುವಾಲ ಕ್ರೀಡಾಂಗಣದ ಬಳಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕನ್ನಡ ಭಾಷೆ ಬೆಳೆಯಬೇಕಾದರೆ ಪಾಲಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಕನ್ನಡ ಭಾಷಾ ಸಂರಕ್ಷಣೆಗೆ ಶ್ರಮಿಸುವುದು ಎಲ್ಲರ ಕರ್ತವ್ಯ. ಕಂಪನಿ ಆಡಳಿತದಲ್ಲಿ ಕನ್ನಡ ಬಳಕೆ ಮಾಡಬೇಕು ಎಂದು ಆದೇಶ ನೀಡಲಾಗಿದೆ’ ಎಂದರು.

ತಾಂತ್ರಿಕ ವಿಭಾಗದ ಅಧಿಕಾರಿ ರವಿಕುಮಾರ ಹಾಗೂ ಶಿಕ್ಷಕ ನರಸಪ್ಪ ಯಾದವ ಮಾತನಾಡಿದರು.

ಅಧಿಕಾರಿಗಳಾದ ಸೈಹಿಫ್ ಉಲ್ಲಾಖಾನ್, ಎ.ಬಿ. ಲಮಾಣಿ, ಎಚ್‌.ವಿಶ್ವನಾಥ ನಾಯಕ, ಜಗನ್ ಮೋಹನ್, ಸುರೇಶ, ವೈದ್ಯರಾದ ರವಿಂದ್ರ ಮಾವಿನಕಟ್ಟಿ, ಶಂಶುದ್ದಿನ್, ಸಿಬ್ಬಂದಿಗಳಾದ ಮೈಬು, ರಂಗನಾಥ, ಸೇರಿದಂತೆ ಇತರರು ಇದ್ದರು.

ಬಾಬುಸಾಗರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT